MALENADUTODAY.COM | SHIVAMOGGA NEWS
ಭದ್ರಾವತಿಯಲ್ಲಿ #save visl ಹೋರಾಟ ಮುಂದುವರಿದಿದೆ. ಇದರ ನಡುವೆ ದೆಹಲಿಯ ಕೇಂದ್ರ ಉಕ್ಕು ಪ್ರಾಧಿ ಕಾರದ ಸೈಲ್ ಕಾರ್ಪೋರೇಟ್ ಕಚೇರಿಯ ಕಾರ್ಯಪಾಲಕ ನಿರ್ದೇಶಕ (ಇಡಿ) ಕಾರ್ಖಾನೆ ಮುಚ್ಚುವ ವಿಷಯವಿನ್ನೂ ಆರಂಭದ ಹಂತದಲ್ಲಿದೆ ಎಂದಿದ್ದಾರಂತೆ. ಈ ಸಂಬಂಧ ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ಸದಸ್ಯರ ಬಳಿ ಮಾತನಾಡಿದ್ದು, ಕಾರ್ಖಾನೆ ಅಥವಾ ಮನೆಗಳಿಗೆ ಸಂಬಂಧಿಸಿಂತೆ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ, ಸುಳ್ಳು ಮಾಹಿತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ರಾಮಲಿಂಗಯ್ಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್ ಕೇಸ್
ಕಾರ್ಖಾನೆ ಮುಚ್ಚುವ ತೀರ್ಮಾನ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಯಾವುದೇ ತೀರ್ಮಾನಗಳು ಆಗಿಲ್ಲ, ಕಾರ್ಮಿಕರಿಗೆ ಮತ್ತು ನಿವೃತ್ತ ಕಾರ್ಮಿಕರಿಗೆ ತೊಂದರೆ ನೀಡುವುದಿಲ್ಲ. ಯಾರೂ ಗಾಬರಿ ಆಗುವ ಅಗತ್ಯವಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ, ಯಾವುದೇ ಸಮಸ್ಯೆ ಎದುರಾದರೂ ಎಐಎಸ್ಎಲ್ ಕಾರ್ಖಾನೆಯ ಇಡಿ ರವರ ಬಳಿ ಮಾಹಿತಿ ಪಡೆಯಿರಿ ರಾಮಲಿಂಗಯ್ಯ ತಿಳಿಸಿದ್ದಾರೆ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com