ರೌಡಿಶೀಟರ್ ಹಂದಿ ಅಣ್ಣಿಯ ಕೊಲೆಯ ನಂತರ, ಶಿವಮೊಗ್ಗದಲ್ಲಿ ಹೊಸದೊಂದು ವಾತಾವರಣ ನಿರ್ಮಾಣವಾಗಿದೆ. ಆ ವಾತವರಣ ಅಂಡರ್ವರ್ಲ್ಡ್ ನಲ್ಲಿ ಪೊಲೀಸರಿಗೆ ಸವಾಲು ಆಗುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತಿದೆ. ಎಸ್ಪಿ ಮಿಥುನ್ ಕುಮಾರ್ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದರೇ ಕಠಿಣ ಕ್ರಮ ಎಂದು ಆರಂಭದಲ್ಲಿಯೇ ಗುಡುಗಿದ್ದರು. ಅಲ್ಲದೆ ತಮ್ಮ ಮಾತಿಗೆ ಪೂರಕವಾಗಿ ಕಠಿಣ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದಾರೆ.
ಇದನ್ನು ಸಹ ಓದಿ : bhadravati BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್
ಆದಾಗ್ಯು , ಶಿವಮೊಗ್ಗದಲ್ಲಿ ಬಡ್ಡಿಂಗ್ ರೌಡಿಗಳು ದುಡ್ಡು ಮಾಡಲು ಹೊಸದೊಂದು ದಾರಿ ಹುಡುಕಿಕೊಂಡಿವೆ. ಅದಕ್ಕೆ ಆ ರೌಡಿಗಳು ಬಳಸಿಕೊಳ್ಳುತ್ತಿರುವ ಹೆಸರು ಕಾಡಾ ಕಾರ್ತಿ & ಆ್ಯಂಡ್ ಟೀಂ. ಹೌದು, ಶಿವಮೊಗ್ಗದಲ್ಲಿ ಕಾಡಾ ಕಾರ್ತಿ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುವ ಪ್ರವೃತ್ತಿಗಳು ನಡೆಯುತ್ತಿವೆ. ಅದರಲ್ಲಿಯು ವಿಶೇಷವಾಗಿ ಇಸ್ಪೀಟ್ ಅಡ್ಡೆಗಳೇ ಇಂತಹವರ ಟಾರ್ಗೆಟ್ ಆಗಿದೆ ಎಂಬುದು ಖಚಿತವಾಗಿ ಮಲೆನಾಡು ಟುಡೆಗೆ ಸಿಕ್ಕಿರುವ ಮಾಹಿತಿ.
ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ
ಸಾಮಾನ್ಯವಾಗಿ ಇಸ್ಪಿಟ್ ಅಡ್ಡೆಗಳ ಪೊಲೀಸರ ರೇಡ್ ನಡೆಯುತ್ತದೆ. ಆದರೆ ಇತ್ತೀಚಿನ ಕೆಲದಿನಗಳಲ್ಲಿ ಇಸ್ಪಿಟ್ ಅಡ್ಡೆಗಳ ಮೇಲೆ ಕಾಡಾ ಕಾರ್ತಿ ಹೆಸರನ್ನ ಹೇಳಿಕೊಂಡು ಬರುವ ಗ್ಯಾಂಗ್ನ ದಾಳಿ ನಡೆಯುತ್ತಿದೆ. ಅಷ್ಟೆಅಲ್ಲದೆ ಅಂದರ್ ಆಗಿರುವ ಕಾಡಾ ಕಾರ್ತಿ ಮತ್ತವನ ಟೀಂನ ಹೆಸರು ಹೇಳಿ ಲಕ್ಷ ಲಕ್ಷ ಸುಲಿಗೆ ಮಾಡಲಾಗುತ್ತಿದೆ.
ಇದನ್ನು ಸಹ ಓದಿ : ರಾಷ್ಟ್ರ ಮಟ್ಟದಲ್ಲಿ ಮರ್ಯಾದೆ ಕಳೆದ ಶಿವಮೊಗ್ಗ ಜಿಲ್ಲೆಯ ಏಳಿಗೆ ಸರ್ಕಾರಿ ಶಾಲೆಯ ಸೀರೆ ಶೌಚಾಲಯ
ಇತ್ತೀಚೆಗೆ ಶಿವಮೊಗ್ಗ ಪೊಲೀಸರು ವಿದ್ಯಾನಗರ-ಮತ್ತೂರು ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬ ಆರೋಪದ ಮೇರೆಗೆ ತೊಟ್ಟಿ ಸೀನಾ & ಗ್ಯಾಂಗ್ನ್ನ ಅರೆಸ್ಟ್ ಮಾಡಿದ್ದರು. ಆದರೆ ಇವರ ಅರೆಸ್ಟ್ಗೂ ಕೆಲದಿನ ಮೊದಲು ತೊಟ್ಟಿ ಸೀನಾ ಕಲ್ಲಳ್ಳಿಯಲ್ಲಿ ನಡೆಸ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಕಾಡಾ ಕಾರ್ತಿಯ ಹೆಸರು ಹೇಳಿಕೊಂಡು ದಾಳಿ ಮಾಡಿದ್ದ ಹುಡುಗರು ಐದು ಲಕ್ಷ ರೂಪಾಯಿಯವರೆಗೂ ವಸೂಲಿ ಮಾಡಿದ್ದಾರಂತೆ. ಆನಂತರ ಪೊಲೀಸರು ದರೋಡೆ ಕೇಸ್ನಲ್ಲಿ ತೊಟ್ಟಿ ಸೀನನ ಗ್ಯಾಂಗ್ನ್ನ ಅರೆಸ್ಟ್ ಮಾಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಚೆನ್ನಗಿರಿ ಸಮೀಪದ ಮಾವಿನಕಟ್ಟೆಯ ಬಳಿ ಇಸ್ಪೀಟ್ ಅಡ್ಡೆಯೊಂದರ ಮೇಲೆ ದಾಳಿ ಮಾಡಿದ್ದ ಟೀಂವೊಂದು 10 ಲಕ್ಷ ರೂಪಾಯಿ ವಸೂಲಿ ಮಾಡಿತ್ತು. ಅಲ್ಲಿಯು ಆ ಟೀಂ ಕಾಡಾ ಕಾರ್ತಿ ಹೆಸರನ್ನೆ ಬಳಸಿತ್ತು. ಇದರ ನಂತರ ಹೊಸದುರ್ಗದಲ್ಲಿಯು ಈ ಸಂಬಂಧ ಕೇಸ್ವೊಂದು ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಇದನ್ನು ಸಹ ಓದಿ : ಅವಳೊಬ್ಬಳು, ಅವಳಿಗಿಬ್ಬರು…! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್ ಕೇಸ್ ಟ್ವಿಸ್ಟ್
ಹಾಗಂತ ಈ ವಿಚಾರ ಪೊಲೀಸ್ ಇಲಾಖೆ ಗೊತ್ತಿಲ್ಲ ಅಂತೇನಿಲ್ಲ, ಇಲಾಖೆ ಅಂತರಾಳದಲ್ಲಿ ವಿಚಾರ ಹರಿದಾಡುತ್ತಿದೆ. ಮೇಲಾಗಿ ಈ ನಿಟ್ಟಿನಲ್ಲಿ ಶಫಿ ಹಾಗೂ ಕೆಲವರನ್ನು ಬಂಧಿಸಿ ಅಂದರ್ ಮಾಡಿದ್ಧಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಕಾಡಾ ಕಾರ್ತಿಯ ಹೆಸರು ಹೇಳುತ್ತಿರುವ ಬಡ್ಡಿಂಗ್ ರೌಡಿಗಳು ಕಂಟ್ರೋಲ್ಗೆ ಸಿಗುತ್ತಿಲ್ಲ. ಕಾಡಾ ಕಾರ್ತಿ ಆ್ಯಂಡ್ ಗ್ಯಾಂಗ್ ಈ ಸುಲಿಗೆ ಪ್ರಕರಣಗಳಲ್ಲಿ ನೇರ ಪಾತ್ರ ವಹಿಸಿದೆಯೇ? ಅಥವಾ ಕಾಡಾ ಕಾರ್ತಿಯ ಹೆಸರನ್ನು ಹೇಳಿಕೊಂಡು ಬೇರೆ ಬೇರೆ ಟೀಂಗಳು ಕಾಸು ಮಾಡಿಕೊಳ್ತಿವೆಯೇ? ಎರಡು ಪ್ರಶ್ನೆಗಳಿಗು ಸದ್ಯ ಮಟ್ಟಿಗೆ ಇರಹಬಹದು ಎಂಬ ಉತ್ತರ ಸಿಗುತ್ತಿದೆ.
ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು
ಮುಖ್ಯವಾಗಿ ಅಣ್ಣಿ ಕೊಲೆಯ ಬಳಿಕ ಶಿವಮೊಗ್ಗ ರೌಡಿ ಮಾರ್ಕೆಟ್ನಲ್ಲಿ ಕಾಡಾ ಕಾರ್ತಿಯ ಹೆಸರು ಜೋರಾಗಿ ಓಡುತ್ತಿದೆ. ಅದರಲ್ಲಿಯು ಹೆಬ್ಬೆಟ್ಟು ಹಾಗೂ ನವುಲೆ ನಡುವಿನ ವೈಷಮ್ಯಗಳ ನಡುವೆ ಕಾಡಾ ಕಾರ್ತಿ ಫೀಲ್ಡ್ನಲ್ಲಿ ಮುಂಚೂಣಿಗೆ ಬಂದಿರುವುದನ್ನೆ ಕೆಲವರು ಎನ್ಕ್ಯಾಶ್ ಮಾಡಿಕೊಳ್ತಿದ್ಧಾರೆ ಎಂಬ ಮಾಹಿತಿಯಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ರೌಡಿ ಗಿರಾಕಿಗಳನ್ನು ಕಂಟ್ರೋಲ್ಗೆ ತೆಗೆದುಕೊಳ್ಳಲು ಮುಂದಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp