ಅವಳೊಬ್ಬಳು, ಅವಳಿಗಿಬ್ಬರು...! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್​ ಕೇಸ್​ ಟ್ವಿಸ್ಟ್

ಭದ್ರಾವತಿಯ ನಿವಾಸಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು, ಆ ನಂತರ ತನ್ನ ಬಾಲ್ಯ ಸ್ನೇಹಿತನ ಜೊತೆಗೆ ಹೋಗಿದ್ದರು. ಅದಕ್ಕೆ ತಲೆಕೆಡಿಸಿಕೊಳ್ಳದ ಪತಿ, ಹೇಗೋ ಬದುಕಲಿ ಎಂದು ಸುಮ್ಮನಾಗಿದ್ದರು.

ಅವಳೊಬ್ಬಳು, ಅವಳಿಗಿಬ್ಬರು...! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್​ ಕೇಸ್​ ಟ್ವಿಸ್ಟ್

ಭದ್ರಾವತಿಯಲ್ಲಿ ಪತಿಯ ಎದುರೇ ಪತ್ನಿಯನ್ನು ಕಿಡ್ನ್ಯಾಪ್​ ಮಾಡಿದ ಪ್ರಕರಣವೊಂದು ಪೊಲೀಸರಿಗೆ ಬೆನ್ನುಬಿದ್ದಿತ್ತು. ಈ ವಿಚಾರದಲ್ಲಿ ಅಲರ್ಟ್​ ಆದ ಪೊಲೀಸರು, ಪ್ರಕರಣದ ಅಂತರಾಳದಲ್ಲಿಯೇ ತನಿಖೆ ಆರಂಭಿಸಿದ್ದರು. ಆಗ ಅವರಿಗೆ ಕಾಣಿಸಿದ್ದು ತ್ರಿಶಂಕು ಸಂಸಾರದ ಕಥೆ..

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಭದ್ರಾವತಿಯ ನಿವಾಸಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು, ಆ ನಂತರ ತನ್ನ ಬಾಲ್ಯ ಸ್ನೇಹಿತನ ಜೊತೆಗೆ ಹೋಗಿದ್ದರು. ಅದಕ್ಕೆ ತಲೆಕೆಡಿಸಿಕೊಳ್ಳದ ಪತಿ, ಹೇಗೋ ಬದುಕಲಿ ಎಂದು ಸುಮ್ಮನಾಗಿದ್ದರು. ಈ ನಡುವೆ ಏಳು ವರ್ಷದ ನಂತರ ಮಹಿಳೆ ತನ್ನ ಗಂಡ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ವಾಪಸ್ ಬಂದಿದ್ದಾರೆ.  ಆಗಲೂ ಪತಿ ಪತ್ನಿಯನ್ನ ಬರಮಾಡಿಕೊಂಡಿದ್ದಾನೆ. ಆದರೆ ಏಳುವರ್ಷ ಜೊತೆಗಿದ್ದ ಪ್ರಿಯಕರನಿಗೆ ತನ್ನೊಂದಿಗೆ ಇದ್ದು ಈಗ ವಾಪಸ್ ಹೋದವಳು ತನ್ನ ಹಣವನ್ನು ಸಹ ಕೊಂಡೊಯ್ದಿದ್ದಾಳೆ ಎಂಬ ಅನುಮಾನ ಮೂಡಿತ್ತು. ಇದರ ಜೊತೆಯಲ್ಲಿ ಬಾಲ್ಯದ ಪ್ರೀತಿ ಮತ್ತೆ ದೂರವಾದ ಸಿಟ್ಟು ಉಲ್ಬಣಿಸಿತ್ತು.

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ಹೀಗಾಗಿ ಮೂವರನ್ನು ಜೊತೆಗ ಹಾಕಿಕೊಂಡು ಮಹಿಳೆಯನ್ನು ಅವಳ ಮನೆಗೆ ನುಗ್ಗಿ, ಪತಿಯ ಎದುರೇ ಕಿಡ್ನ್ಯಾಪ್ ಮಾಡಿದ್ದ. ಆಕೆಯನ್ನು ಬೇರೆಯದ್ದೆ ಜಿಲ್ಲೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿತ್ತು. ಅಷ್ಟರಲ್ಲಿ ಬೆನ್ನಟ್ಟಿದ್ದ ಪೊಲೀಸರು ನಾಲ್ವರನ್ನು ಬಂಧಿಸಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ.  ಈ ನಡುವೆ ಕಂಪ್ಲೇಟ್​ ಬೇಡ, ಇಲ್ಲಿಗೆ ಬಿಟ್ಟುಬಿಡೋಣ ಎಂಬಿತ್ಯಾದಿ ಮಾತುಗಳು ನಡೆದಿವೆ ಎನ್ನಲಾಗ್ತಿದೆ. ಆದಾಗ್ಯು, ಸಂಸಾರದ ಗುಟ್ಟು ಸ್ಟೇಷನ್​ ಮೆಟ್ಟಿಲು ಹತ್ತಿದ ಮೇಲೆ ಕೇಸು ಆಗದೇ ಇರದು. ಸದ್ಯ ಅದೇ ಆಗಿದ್ದು, ತನ್ನಿಷ್ಟದ ಮಹಿಳೆಯ ಸಹವಾಸದಲ್ಲಿ ಪ್ರಿಯಕರ ಆತನೊಂದಿಗೆ ಆತನಕಾರಣಕ್ಕೆ ಇನ್ನೂ ಮೂವರು ಜೈಲು ಸೇರಿದ್ಧಾರೆ. 

ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link