ಮಲೆನಾಡು ಟುಡೆ ಸುದ್ದಿ / ಸಾಗರ / ಮನೆಯ ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ₹2.54 ಲಕ್ಷ ನಗದು ಹಣ ಕಳವು ಪ್ರಕರಣವನ್ನು ಸಾಗರ ಪೇಟೆ ಪೊಲೀಸರು ಕೆಲವೇ ಗಂಟೆಯಲ್ಲಿ ಇತ್ಯರ್ಥ ಮಾಡಿದ್ದಾರೆ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಾಗರ ಪೇಟೆ ಪೊಲೀಸರು, ಆರೋಪಿಯಿಂದ ₹2,29,900 ನಗದು ವಶಪಡಿಸಿಕೊಂಡಿದ್ದಾರೆ.
ಸಾಗರ ಪೇಟೆ ಪೊಲೀಸರ ಕಾರ್ಯಾಚರಣೆ
ಕಳೆದ ಸೆಪ್ಟೆಂಬರ್ 6ರಂದು ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ದೂರು ದಾಖಲಾಗಿತ್ತು, ಸಾಗರದ ಅಣಲೆಕೊಪ್ಪ ನಿವಾಸಿ ಉಮಾ ಎಂಬವರು ತಮ್ಮ ಮನೆಯ ಗಾಡ್ರೇಜ್ನಲ್ಲಿ ₹2,54,000 ಕ್ಯಾಶ್ ಇಟ್ಟಿದ್ದೆ. ಅದು ಕಳ್ತನವಾಗಿದೆ. ಮನೆಗೆ ಆಗಾಗ ಕೆಲಸಕ್ಕೆ ಬರುತ್ತಿದ್ದ ಪಾಂಡುರಂಗ ಎಂಬಾತನ ಮೇಲೆ ಅನುಮಾನ ಇದೆ ಎಂದು ಆರೋಪಿಸಿ ಕಂಪ್ಲೆಂಟ್ ಮಾಡಿದ್ರು. ಬಿಎನ್ಎಸ್ ಕಲಂ 305 ಮತ್ತು 306 ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯನ್ನ ಟ್ರೇಸ್ ಮಾಡಿ, ಸ್ಟೇಷನ್ಗೆ ಎಳ್ಕೊಂಡು ಬಂದಿದ್ದಾರೆ. ಅಲ್ಲದೆ ಕಳುವಾದ ಕ್ಯಾಶ್ ವಸೂಲಿ ಮಾಡಿದ ಪೊಲೀಸರು, ನಾಲ್ಕು ಗಂಟೆಯಲ್ಲಿ ಕೇಸ್ಗೆ ಇತ್ಯರ್ಥ ನೀಡಿದ್ದಾರೆ.
ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದಲ್ಲಿದ್ದ ಪಿಎಸ್ಐ ಶಾಂತರಾಜ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್ಸಿ ವಿಶ್ವನಾಥ ಮತ್ತು ಪಿಸಿ ನರೇಂದ್ರ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆರೋಪಿ ಮೂಲತಃ ಮಹಾರಾಷ್ಟ್ರ ದ ರತ್ನಗಿರಿಯವನು ಎಂದು ತಿಳಿದುಬಂದಿದೆ.
