ಶಿವಮೊಗ್ಗ: ಹೇಳಿದ ಜಾಗಕ್ಕೆ ಬರಲಿಲ್ಲವೆಂದು ಆಟೋ ಚಾಲಕನ ಮೇಲೆ ಬ್ಲೇಡ್‌ನಿಂದ ಹಲ್ಲೆ; ಮೂವರ ವಿರುದ್ಧ ಎಫ್‌ಐಆರ್!

ಹಂಚಿಕೊಳ್ಳಿ
WhatsApp Facebook X Telegram
Strict action warned against auto-rickshaws without renewed Fitness Certificate in Shivamogga

ಶಿವಮೊಗ್ಗ: ಕೇಳಿದ ಜಾಗಕ್ಕೆ ಆಟೋ ಬಿಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಂದಿಗೆ ಗಲಾಟೆ ತೆಗೆದು, ಆತನ ಮೇಲೆ ಮೂವರು ಯುವಕರು ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ :  ಶಾಸಕ ರಿಜ್ವಾನ್ ಅರ್ಷದ್‌ಗೆ ಸಚಿವ ಸ್ಥಾನಕ್ಕಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

Shimoga ಘಟನೆಯ ವಿವರ

ಎಫ್​​ ಐ ಆರ್​​ನಲ್ಲಿ ಇರುವಂತೆ  ಆಟೋ ಚಾಲಕ  ಜೂನ್ 15ರ ಸಂಜೆ ಸುಮಾರು 7:50ರ ಸಮಯದಲ್ಲಿ ಚಾಲಕ ಶಿವಮೊಗ್ಗದ ಜೈಲ್ ಸರ್ಕಲ್ ಆಟೋ ಸ್ಟ್ಯಾಂಡ್‌ನಲ್ಲಿದ್ದಾಗ ಮೂವರು ಅಪರಿಚಿತ ಯುವಕರು ಬಂದು ವಾಜಪೇಯಿ ಲೇಔಟ್‌ಗೆ ಬಾಡಿಗೆಗೆ ಬರುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಆಟೋ ಚಾಲಕ 200 ರೂಪಾಯಿ ಚಾರ್ಜ್ ಆಗುತ್ತದೆ ಎಂದು ಹೇಳಿದ್ದು, ಅದಕ್ಕೆ ಒಪ್ಪಿದ ಯುವಕರು ಆಟೋ ಹತ್ತಿದ್ದಾರೆ. 

ಆಟೋ ಚಾಲಕ ವಾಜಪೇಯಿ ಲೇಔಟ್ ತಲುಪಿದಾಗ ಅಲ್ಲಿ ಒಳಗಡೆ ತುಂಬಾ ಕತ್ತಲೆ ಇತ್ತು. ಈ ಕಾರಣಕ್ಕೆ ಚಾಲಕ ನಾನು ಅಷ್ಟೊಂದು ಒಳಗಡೆ ಬರುವುದಿಲ್ಲ ಎಂದು ವಾಜಪೇಯಿ ಬಡಾವಣೆಯ ಆರ್ಚ್ ಬಳಿಯೇ ಹೇಳಿದ್ದಾನೆ. ಇದರಿಂದ ಕೋಪಗೊಂಡ ಆ ಮೂವರು ಯುವಕರು ತಮಗೆ ಬಾಡಿಗೆ ಕೊಡುವುದಿಲ್ಲ ಎಂದು ಜಗಳ ತೆಗೆದಿದ್ದಾರೆ. ಚಾಲಕ ಆರ್ಚ್‌ನಿಂದ ಸ್ವಲ್ಪ ದೂರ ಅಂದರೆ ಸುಮಾರು 100 ಮೀಟರ್ ಒಳಗಡೆ ಹೋದಾಗ, ಆಟೋದಿಂದ ಕೆಳಗಿಳಿದ ಯುವಕರು ಚಾಲಕನ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಳಿ ಇದ್ದ ಬ್ಲೇಡ್ ತೆಗೆದುಕೊಂಡು ಆಟೋ ಚಾಲಕನ ಎಡಗೈ ಹಾಗೂ ಹೊಟ್ಟೆಯ ಬಲ ಭಾಗಕ್ಕೆ ಕೋಯ್ದು ಗಾಯಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕೈಯಿಂದ ಬೆನ್ನಿನ ಭಾಗಕ್ಕೆ ಗುದ್ದಿ, ನಿನ್ನನ್ನು ಜೀವಸಮೇತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. 

Shimoga Auto Driver Slashed with Blade

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor