Daily Astrology and Panchanga / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ ಬಹುಳ ಪಾಡ್ಯಮಿ ತಿಥಿಯು ಸಂಜೆ 4.40 ರವರೆಗೆ ಇರಲಿದ್ದು, ಬಳಿಕ ಬಿದಿಗೆ ಆರಂಭವಾಗಲಿದೆ. ಬೆಳಿಗ್ಗೆ 7.40 ರವರೆಗೆ ಪುಬ್ಬ ನಕ್ಷತ್ರ್ಯ ಇರಲಿದ್ದು, ತದನಂತರ ಉತ್ತರ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಗಳಿಗೆ ರಾತ್ರಿ 12.53 ರಿಂದ 2.33 ರವರೆಗೆ ಒದಗಿಬರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ / ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ದೂರ ಪ್ರಯಾಣ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯ ದಿನ. ಅನಾರೋಗ್ಯ.
ವೃಷಭ / ಅನಿರೀಕ್ಷಿತ ಪ್ರಯಾಣ. ಉದ್ಯೊಗ ಹಾಗೂ ವ್ಯವಹಾರಗಳಲ್ಲಿ ಆಶಾದಾಯಕ ಫಲಿತಾಂಶ. ಆರೋಗ್ಯದಲ್ಲಿ ಏರುಪೇರು, ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ.
ಮಿಥುನ / ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉತ್ಸಾಹ. ಪುಣ್ಯಕ್ಷೇತ್ರಗಳ ದರ್ಶನ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಆಸ್ತಿ ಲಾಭ.
ಕರ್ಕಾಟಕ / ಕೈಗೆತ್ತಿಕೊಳ್ಳುವ ಕೆಲಸಗಳಲ್ಲಿ ಅಡೆತಡೆ. ಹಣಕಾಸಿನ ಅಗತ್ಯಗಳಿಗಾಗಿ ಸಾಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯದಿನ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ
ಸಿಂಹ / ನೂತನ ಯೋಜನೆಗಳಿಗೆ ಚಾಲನೆ. ಬಾಲ್ಯದ ಸ್ನೇಹಿತರ ಭೇಟಿ. ಆರ್ಥಿಕವಾಗಿ ಲಾಭದಾಯಕ ದಿನ, ಹೊಸ ವಾಹನ ಖರೀದಿ. ಉದ್ಯೋಗ ಹಾಗೂ ವ್ಯವಹಾರ ಅತ್ಯಂತ ಉತ್ಸಾಹದಾಯಕವಾಗಿ ಸಾಗಲಿವೆ.

ಕನ್ಯಾ / ಅನಿರೀಕ್ಷಿತ ಪ್ರಯಾಣ. ಜವಾಬ್ದಾರಿಗಳು ಹೆಚ್ಚಾಗಲಿವೆ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡದ ವಾತಾವರಣ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.
ತುಲಾ / ಹೊಸ ಉದ್ಯೋಗಾವಕಾಶ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಅನಿರೀಕ್ಷಿತವಾಗಿ ಶುಭ ಕಾರ್ಯ. ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ.
ವೃಶ್ಚಿಕ / ಹೊಸ ಕಾರ್ಯಗಳಿಗೆ ನಾಂದಿ. ಸಂತೋಷ ತರುವಂತಹ ಶುಭ ಸುದ್ದಿ ಕಿವಿಗೆ ಬೀಳಲಿವೆ. ಆರ್ಥಿಕವಾಗಿ ಹೆಚ್ಚುವರಿ ಆದಾಯ ಹರಿದುಬರಲಿದ್ದು, ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ಆಶಾದಾಯಕವಾಗಿರಲಿವೆ.
ಧನುಸ್ಸು / ದೂರ ಪ್ರಯಾಣ. ಹಣಕಾಸಿನ ಖರ್ಚು, ಜವಾಬ್ದಾರಿಗಳ ಹೊರೆ ಏರಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಾಮಾನ್ಯದಿನ. ಛಲ ಬಿಡದೆ ಮುನ್ನುಗ್ಗುವುದು ಅತ್ಯಗತ್ಯ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

ಮಕರ / ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಉದ್ಯೋಗ ಮತ್ತು ವೃತ್ತಿಪರ ಕೆಲಸ ನಿಧಾನಗತಿಯಲ್ಲಿ ಸಾಗಲಿವೆ. ಅನಾರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ಒತ್ತಡ, ಕೆಲವು ವಿಚಿತ್ರ ಘಟನೆಗಳು ನಡೆಯುವ ಸಾಧ್ಯತೆ.
ಕುಂಭ / ಆಸ್ತಿ ವಿವಾದ ಬಗೆಹರಿಯಲಿವೆ. ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಕೈಗೊಂಡ ಕೆಲಸದಲ್ಲಿ ಸಿದ್ಧಿ ಲಭಿಸಲಿದೆ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಅನುಕೂಲಕರ ವಾತಾವರಣ.
ಮೀನ / ಉದ್ಯೋಗಕ್ಕಾಗಿ ಮಾಡುತ್ತಿರುವ ಪ್ರಯತ್ನಗಳಿಗೆ ಸಕಾರಾತ್ಮಕ ಸ್ಪಂದನೆ. ಹೊಸ ವ್ಯಕ್ತಿಗಳ ಪರಿಚಯ, ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ. ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸಿನತ್ತ ಹೆಜ್ಜೆ ಇಡಲಿದ್ದೀರಿ.
ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಆರಂಭ: ಭಕ್ತಸಮೂಹಕ್ಕೆ ಮಾರವ್ವನ ಮೊದಲ ದರ್ಶನ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
