hosanagara death news today/ ಹೊಸನಗರದ ಐಸ್ ಕ್ಯಾಂಡಿ ನಾರಾಯಣ ಇನ್ನಿಲ್ಲ

This Article Written by / Malenadu Today / ಡಿಸೆಂಬರ್ 10, 2023

SHIVAMOGGA  HOSANAGARA|  Dec 9, 2023 |  hosanagara death news today /  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಐಸ್ ಕ್ಯಾಂಡಿ ನಾರಾಯಣ ಎಂದೆ ಕರೆಯಲ್ಪಡುತ್ತಿದ್ದ ವಡಕನಕೊಪ್ಪ ಸತ್ಯ ನಾರಾಯಣರವರು ನಿಧನರಾಗಿದ್ದಾರೆ.  

ಹೊಸನಗರ ತಾಲೂಕು

ಹೊಸನಗರ ತಾಲೂಕು ಮೇಲಿನ ಬೇಸಿಗೆ ಗ್ರಾಮ ಪಂಚಾಯತಿಯ ವಡಕನ ಕೊಪ್ಪದ ದಿವಂಗತ ವೆಂಕಟನಾಯಕ ರವರ ಪುತ್ರ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.  ಐಸ್ ಕ್ಯಾಂಡಿ ನಾರಾಯಣ ಎಂದೇ ಚಿರಪರಿಚಿತರಾಗಿದ್ದ ಇವರು  ಶ್ರೀ ಗುರು ಕೋಲ್ಡ್ ಡ್ರಿಂಕ್ಸ್ ನಲ್ಲೆ ಮೂರು ದಶಕಕ್ಕೂ ಹೆಚ್ಚು ಕಾಲ  ಕೆಲಸ ಮಾಡಿದ್ದರು ಮೃತರು ಪತ್ನಿ ಪುತ್ರ ಇಬ್ಬರು ಪುತ್ರಿಯರು ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ

ಸತ್ಯನಾರಾಯಣ ರವರು ಕಾಂಗ್ರೆಸ್ ಪಕ್ಷದ ಮಣಶೆಟ್ಟೆ ಬೂತ್ ಅಧ್ಯಕ್ಷರಾಗಿ ಇದ್ದರು ಅವರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಭಾಕರ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಬಂಡಿ ರಾಮಚಂದ್ರ ತಾ ಪಂ ಮಾಜಿ ಸದಸ್ಯ ಏರಿಗೆ ಉಮೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ನಾಗರಾಜ್ ಬಿಜೆಪಿ ಮುಖಂಡ ಉಮೇಶ್ ಕಂಚು ಗಾರ್ ಮಾಜಿ ಶಾಸಕ ಬಿ ಸ್ವಾಮಿರಾವ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ


 

ಮುಂದಿನ ಸುದ್ದಿ ಒದಿ

Leave a Comment