ವಿಮಾನ ಸಂಚಾರ ಆರಂಭಕ್ಕೆ ಸಿದ್ದತೆ! AIRPORT ಗೆ ಬಸ್​ ಸೌಕರ್ಯ ಕಲ್ಪಿಸಿದ KSRTC

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS   

 ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇದೇ ಆಗಸ್ಟ್ 31 ರಂದು ಬೆಂಗಳೂರಿನಿಂದ ಮೊದಲ ವಿಮಾನ ಬಂದಿಳಿಯಲಿದೆ. ಮೊದಲ ಪ್ಯಾಸೆಂಜರ್ ಆಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರೇ ಪ್ಲೈಟ್​ನಲ್ಲಿ ಆಗಮಿಸಲಿದ್ದು,  ಸಚಿವ ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ. 

ಈ ಮಧ್ಯೆ ಶಿವಮೊಗ್ಗ ಸಿಟಿಯಿಂದ-ವಿಮಾನ ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಕೆಎಸ್​ಆರ್​ಟಿಸಿ ಸಂಸ್ಥೆ ಶಿವಮೊಗ್ಗದಿಂದ ವಿಮಾನ ನಿಲ್ದಾಣದವರೆಗೂ ಬಸ್ ಸೌಲಭ್ಯವನ್ನು ಒದಗಿಸಿದೆ. ಈ ಸಂಬಂಧ ಇವತ್ತು ಮೊದಲ ಬಸ್  ವಿಮಾನ ನಿಲ್ದಾಣದವರೆಗೂ ಸಂಚರಿಸಿತು. 

ಶಿವಮೊಗ್ಗ ಬಸ್ ನಿಲ್ದಾಣದಿಂದ  ವಿಮಾನನಿಲ್ದಾಣದವರೆಗಿನ ರೂಟ್​ನಲ್ಲಿ ಸಂಚರಿಸಲಿರುವ ಬಸ್​, ಕಾಚಿನಕಟ್ಟೆ, ಎಂಆರ್​ಎಸ್​ ಸೇರಿದಂತೆ ವಿವಿಧ ಕಡೆಗಳಲ್ಲಿ ನಿಲ್ಲಲಿದೆ. ಇನ್ನೂ ವಿಮಾನ ನಿಲ್ದಾಣಕ್ಕೆ ನೂತನವಾಗಿ ಬಸ್ ಸೌಕರ್ಯ ಕಲ್ಪಿಸಿರುವುದಕ್ಕೆ ಕಾಚಿನಕಟ್ಟೆ ಗ್ರಾಮಸ್ಥರು ಸಂತೋಷಗೊಂಡಿದ್ದು, ಬಸ್​ಗೆ ಇವತ್ತು ಪೂಜೆ ಸಲ್ಲಿಸಿದ್ರು.   

ಇನ್ನಷ್ಟು ಸುದ್ದಿಗಳು 


 

 

Leave a Comment