KARNATAKA NEWS/ ONLINE / Malenadu today/ Aug 6, 2023 SHIVAMOGGA NEWS
ರಾಜಕೀಯ ನಾಯಕರು ಸೈದ್ದಾಂತಿಕವಾಗಿ ಬಿನ್ನಾಭಿಪ್ರಾಯ ಹೊಂದಿರುತ್ತಾರೆ ಹೊರತು ವೈಯಕ್ತಿಕವಾಗಿ ಸ್ನೇಹವನ್ನ ಹೊಂದಿರುತ್ತಾರೆ. ಅದರಲ್ಲಿಯು ಮಲೆನಾಡಿನ ಹಿರಿಯ ರಾಜಕಾರಣಿಗಳು, ಕಿರಿಯರಿಗೆ ಉತ್ತಮವಾದುದನ್ನೇ ಹೇಳಿಕೊಟ್ಟು, ಅನುಭವವನ್ನ ದಾರೆ ಎರೆದು, ವಿನಯತೆ ಮಾನವೀಯತೆಯ ಪಾಠ ಹೇಳಿಕೊಡುತ್ತಾರೆ. ಇಂತಹದ್ದೊಂದು ವಿಶೇಷ ಪಾಠಕ್ಕೆ ಸಾಕ್ಷಿಯಾಗಿತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದ ಅಪ್ಕೋಸ್ ಸುವರ್ಣ ಮಹೋತ್ಸವದ ಕಾರ್ಯಕ್ರಮ.
ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳಿಗೆಲ್ಲರಿಗೂ ಆಹ್ವಾನ ನೀಡಿದ್ದ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಚಿವ ರಾಜಣ್ಣ, ಕಾಂಗ್ರೆಸ್ ಆರ್ಎಂ ಮಂಜುನಾಥ್ ಗೌಡರು, ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು ವೇದಿಕೆಯಲ್ಲಿ ಆಸೀನರಾಗಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಿವೈ ರಾಘವೇಂದ್ರ ರವರು ಬಂದರು. ಅವರನ್ನ ಈ ಕಡೆಗೆ ಬನ್ನಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣರವರು ಕರೆದರು. ಇದೇ ವೇಳೆ, ರಾಜಣ್ಣರವರ ಜೊತೆ ಮಾತನಾಡುತ್ತಿದ್ದ ಕಾಗೋಡು ತಿಮ್ಮಪ್ಪನವರು ಸಂಸದರನ್ನ ನೋಡುತ್ತಲೇ ಎದ್ದು ನಿಂತರು , ಬಾರಾ ಎಂದು ಮಲೆನಾಡ ಮಾತಲ್ಲೆ ಕರೆದ ಅವರು ತಾವು ಕುಳಿತಿದ್ದ ಜಾಗದಲ್ಲಿಯೇ ಕುಳಿತುಕೋ ಎಂದು ಕುರ್ಚಿ ಬಿಟ್ಟುಕೊಟ್ಟರು. ತಕ್ಷಣವೇ ಬೇಡ ಎಂದ ಸಂಸದ ಬಿ.ವೈ. ರಾಘವೇಂದ್ರ ಕಾಗೋಡುರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಕಾಗೋಡು ತಿಮ್ಮಪ್ಪನವರು ತಮ್ಮ ಪಕ್ಕದಲ್ಲಿಯೇ ಕೂರುವಂತೆ ಕೂರಿಸಿಕೊಂಡು , ರಾಘವೇಂದ್ರರವರ ಕೈ ಹಿಡಿದುಕೊಂಡು ಯೋಗಕ್ಷೇಮ ವಿಚಾರಿಸಿದರು. ಇದಕ್ಕೆ ಅಲ್ಲಿದ್ದ ಮುಖಂಡರು ಸಾಕ್ಷಿಯಾದರು.
ಕಿರಿಯರನ್ನ ಹೇಗೆ ನಡೆಸಿಕೊಳ್ಳಬೇಕು! ಹಿರಿಯರಿಗೆ ಹೇಗೆ ಗೌರವಿಸಬೇಕು! ಮಲೆನಾಡ ಮಣ್ಣಿನ ಪಾಠಕ್ಕೆ ಸಾಕ್ಷಿಯಾಯ್ತು ಕಾಗೋಡು ತಿಮ್ಮಪ್ಪ-ಸಂಸದ ಬಿ.ವೈ.ರಾಘವೇಂದ್ರರವರ ಈ ಭೇಟಿ! #shivamogga #sagara #BYR pic.twitter.com/qgGR12yLPL
— malenadutoday.com (@CMalenadutoday) August 6, 2023
ಇನ್ನಷ್ಟು ಸುದ್ದಿಗಳು
ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?