KARNATAKA NEWS/ ONLINE / Malenadu today/ May 1, 2023 GOOGLE NEWS
ಹೊಸನಗರ / ಶಿವಮೊಗ್ಗ/ ಇಲ್ಲಿನ ಹಸಿರುಮಕ್ಕಿ ಲಾಂಚ್ ನಲ್ಲಿ ನಿನ್ನೆ ದುರ್ಘಟಣೆಯೊಂದು ಸಂಭವಿಸಿದೆ. ಲಾಂಚ್ನ ಡೋರ್ ಕೇಬಲ್ ಕಟ್ ಆಗಿ, ಡೋರ್ ಮೇಲೆ ನಿಂತಿದ್ದ ಬೈಕ್ ನೀರಿಗೆ ಬಿದ್ದಿದೆ.ಈ ವೇಳೆ ಬೈಕ್ನ್ನ ಹಿಡಿದುಕೊಳ್ಳಲು ಮುಂದಾದ ಲಾಂಚ್ ಸಿಬ್ಬಂದಿ ಕೂಡ ಹಿನ್ನಿರಿಗೆ ಬಿದ್ದಿದ್ದಾರೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಏನಾಗಿದ್ದು?
ಶರಾವತಿ ಹಿನ್ನೀರಿನಲ್ಲಿ (Sharavati back water) ಹಸಿರು ಮಕ್ಕಿ ಕಡೆಯಿಂದ ಲಾಂಚ್ ಇನ್ನೊಂದು ಬದಿಯ ದಡದ ಹತ್ತಿರ ಬರುತ್ತಿತ್ತು. ಈ ವೇಳೆ ಲಾಂಚ್ನ ಡೋರ್ಗೆ ಹಾಕಲಾಗಿದ್ದ ಕೇಬಲ್ ಕಟ್ ಆಗಿದೆ. ಪರಿಣಾಮ ಅದರ ಮೇಲೆ ನಿಲ್ಲಿಸಿದ್ದ ಬೈಕ್ ಹಿನ್ನೀರಿಗೆ ಬೀಳಲು ಆರಂಭಿಸಿದೆ. ಅದನ್ನ ಹಿಡಿದುಕೊಳ್ಳಲು ಹೋದ ಸಿಬ್ಬಂದಿ ಸಹ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.
ನೀರಿಗೆ ಬಿದ್ದ ಸಿಬ್ಬಂದಿ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಸ್ಥಳೀಯರು ನೀರಿಗೆ ಬಿದ್ದ ಬೈಕ್ನ್ನ ಕೂಡ ದಡಕ್ಕೆ ಎಳೆದು ತಂದಿದ್ಧಾರೆ. ಇನ್ನೂ ಲಾಂಚ್ ಕೇಬಲ್ ಕಟ್ ಆಗಿದ್ದರಿಂದ ಪ್ರಯಾಣಿಕರನ್ನ ದಡ ಸೇರಿಸುವುದು ಕಷ್ಟವಾಗಿತ್ತು. ಲಾಂಚ್ನಲ್ಲಿ ವಾಹನಗಳು ಸಿಕ್ಕಿಬಿದ್ದಿದ್ದವು.
ಲಾಂಚ್ ಡೋರ್ನ ಮೇಲೆ ವಾಹನಗಳನ್ನು ನಿಲ್ಲಿಸುವಂತಿಲ್ಲ. ಆದರೆ ಜನರ ಒತ್ತಡದಲ್ಲಿ ಲಾಂಚ್ನ ಡೋರ್ ಮೇಲೂ ವಾಹನಗಳು ನಿಂತಿರುತ್ತವೆ. ನಿನ್ನೆ ಅದೃಷ್ಟಕ್ಕೆ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.



