shivamogga news today : ಮುನಿಸು ಬದಿಗೊತ್ತಿ ಬಿಎಸ್ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್ ಈಶ್ವರಪ್ಪ
ಬಿವೈ ರಾಘವೇಂದ್ರರವರ ಮಗನ ಮದುವೆ ಅದ್ಧೂರಿಯಾಗಿ ನಡೆದಿದ್ದು ಇವತ್ತು ಶಿಕಾರಿಪುರದಲ್ಲಿ ಆರತಕ್ಷತೆ ನಡೆಯುತ್ತಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಪಾಲ್ಗೊಂಡಿದ್ದು, ತಮ್ಮ ಬಹುಕಾಲದ ಗೆಳಯರು ಆದ ಬಿಎಸ್ವೈ ರನ್ನು ಕುಶಲೋಪಚರಿ ವಿಚಾರಿಸಿದರಷ್ಟೆ ಅಲ್ಲದೆ ವಿಜಯೇಂದ್ರ ಹಾಗೂ ರಾಘವೇಂದ್ರರನ್ನು ಬೆನ್ನುತಟ್ಟಿ ಆಶೀರ್ವಾದ ಮಾಡಿದರು. ವಿವಿಧ ಕಾರಣಕ್ಕೆ ಬಿಎಸ್ ವೈ ಕುಟುಂಬದ ವಿರುದ್ಧ ಸಿಡಿದಿದ್ದ ಕೆಎಸ್ ಈಶ್ವರಪ್ಪ ಕಳೆದ ಲೋಕಸಭಾ ಎಲೆಕ್ಷನ್ನಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದರು.
ಈ ಸಂದರ್ಭದಲ್ಲಿ ಹಾಗೂ ಚುನಾವಣೆ ಮುಗಿದ ಬಳಿಕವೂ ಈಶ್ವರಪ್ಪನವರರು ಯಡಿಯೂರಪ್ಪನವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಅವರನ್ನು ಸಮಧಾನ ಪಡಿಸುವ ಸಂಧಾನ ಕ್ರಮಗಳು ಯಶಸ್ವಿ ಕಾಣದೆ, ಕೊನೆಗೆ ಕೆ ಎಸ್ ಈಶ್ವರಪ್ಪರವರನ್ನು ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿತ್ತು.ಇದು ಒಂದು ಕಾಲದ ಆತ್ಮೀಯ ಗೆಳಯರ ನಡುವೆ ಬಿರುಕಿನ ದೊಡ್ಡ ಗೋಡೆಯನ್ನು ಸೃಷ್ಟಿ ಮಾಡಿತ್ತು. ಇದೆಲ್ಲದರ ನಡುವೆ ಬಿಎಸ್ವೈ ಮೊಮ್ಮಗನ ಮದುವೆ ಆರತಕ್ಷತೆಯಲ್ಲಿ ಕೆಎಸ್ ಈಶ್ವರಪ್ಪನವರು ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದಾರೆ. ಇದು ರಾಜಕಾರಣವನ್ನು ಹತ್ತಿರದಿಂದ ನೋಡುವವರ ಕಣ್ಣಗಳಲ್ಲಿ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ನಡೆದ ಹಿರಿಯೂರು ಕೃಷ್ಣ ಮೂರ್ತಿಗಳ ಸಂಸ್ಕರಣ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಬಿಎಸ್ವೈ ಹಾಗೂ ಕೆಎಸ್ಇ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಾದರೂ ಸಹ ಪರಸ್ಪರ ಮಾತನಾಡಿರಲಿಲ್ಲ. ತಮ್ಮ ತಮ್ಮ ಭಾಷಣದಲ್ಲಿ ಮಾತ್ರ ಪರಸ್ಪರ ಹೆಸರುಗಳನ್ನು ಉಲ್ಲೇಖಿಸಿದ್ದರು. ಇದೀಗ ತಮ್ಮೆಲ್ಲಾ ಮುನಿಸನ್ನು ಬದಿಗೊತ್ತಿ ಕೆಎಸ್ಇ ಬಿಎಸ್ವೈ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

shivamogga news today ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಈ ಆರತಕ್ಷತೆ ಕಾರ್ಯಕ್ರಮ ಕೆಎಸ್ ಈಶ್ವರಪ್ಪ ಹಾಗೂ ಬಿಎಸ್ವೈ ಕುಟುಂಬದ ಮರು ಸಮಾಗಮಕ್ಕೆ ಸಾಕ್ಷಿಯಾಗಿದ್ದು, ಈ ಸೌಹಾರ್ಧ ಭೇಟಿಯು ರಾಜಕಾರಣದಲ್ಲಿ ಟ್ವಿಸ್ಟ್ ಕೊಟ್ಟರು ಕೊಡಬಹುದು.
