SHIVAMOGGA| MALENADUTODAY NEWS | ಮಲೆನಾಡು ಟುಡೆ Apr 12, 2025
ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಯಲ್ಲಿ ನಡೆದ ಡಕಾಯಿತಿ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಬರೋಬ್ಬರಿ 12 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಇನ್ನೂ 9 ಮಂದಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಈ ಪೈಕಿ ಓರ್ವ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದರ ನಡುವೆ ನಿನ್ನೆದಿನ ಎಸ್ಪಿ ಮಿಥುನ್ ಕುಮಾರ್ ಸುದ್ದಿಗೋಷ್ಟಿ ನಡೆಸಿ ಪ್ರಕರಣ ವಿವರ ನೀಡಿದರು, ವಿಶೇಷ ಅಂದರೆ, ಈ ಪ್ರಕರಣಕ್ಕೆ ಮೂಲ ಕಾರಣವಾಗಿದ್ದು , ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿಯಲ್ಲಿರುವ ಉತ್ತರಾದಿ ಮಠದಲ್ಲಿ ₹ 300 ಕೋಟಿ ಕಪ್ಪು ಹಣದ ಸಂಗ್ರಹ ಇದೆ ಎಂಬ ಪುಕಾರು.
ಹೌದು, ಮಹಿಷಿಯ ಉತ್ತರಾದಿ ಮಠದಲ್ಲಿ ಬ್ಲಾಕ್ ಮನಿ ಇದ್ದು ಅದನ್ನು ಕದ್ದರೇ ಜೀವನ ಸೆಟ್ಲು ಎನ್ನುವ ಭಾವನೆಯಲ್ಲಿ ಬರೋಬ್ಬರಿ 15 ಕ್ಕೂ ಹೆಚ್ಚು ಮಂದಿ ಟಿಟಿಯಲ್ಲಿ ಬಂದು ಡಕಾಯಿತಿಗೆ ಯತ್ನಿಸಿದ್ದರು. ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆಯ ನೇರಲೆ ಸುರೇಶ್ ಹಾಗೂ ಸತೀಶ್ ಇಂತಹದ್ದೊಂದು ಸಂಚು ರೂಪಿಸಿ ಇದಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದರು. ಆನಂದಪುರದಲ್ಲಿ ಮರಗೆಲಸ ಮಾಡುವ ಪೃಥ್ವಿರಾಜ್ ಶಿಕಾರಿಪುರದ ಶ್ರೀನಿವಾಸ್ ಜೊತೆ ಸೇರಿಕೊಂಡು ಮಠಕ್ಕೆ ಭೇಟಿಕೊಟ್ಟು ಅಲ್ಲಿನ ಸನ್ನಿವೇಶಗಳನ್ನು ಗಮನಿಸಿದ್ದರು. ಆನಂತರ ಶ್ರೀಕಾಂತ್, ಅಭಿ, ರಾಕೇಶ್, ಚಿಟ್ಟೆ ಭರತ್, ಗಿಡ್ಡ ಪವನ್, ರಮೇಶ್, ಡೈಮಂಡ್ ನವೀನ್, ದರ್ಶನ್, ಆರ್. ಕರಿಬಸಪ್ಪ ಸೆರಿದಂತೆ ಉಳಿದ ಆರೋಪಿಗಳು ಸೇರಿ 18 ಆರೋಪಿಗಳು ಟಿಟಿ ವೆಹಿಕಲ್ನಲ್ಲಿ ಆನಂದಪುರ ಆಯನೂರು, ಹಣಗರೆಕಟ್ಟೆ, ಬೆಜ್ಜವಳ್ಳಿ ಮಾರ್ಗವಾಗಿ ಮಹಿಷಿ ಮಠಕ್ಕೆ ಬಂದಿದ್ದಾರೆ. ಅಲ್ಲಿ ಏಕಾಯೇಕಿ ಮಾರಕಾಸ್ತ್ರ ತೋರಿಸಿ ಹೆದರಿಸಿ ನಗದು, ಲ್ಯಾಪ್ಟಾಪ್ ದೋಚಿದ್ದರು.
300 ಕೋಟಿ ರೂಪಾಯಿ ಬ್ಲಾಕ್ ಮನಿ ಸಿಗಲಿದೆ ಎಂದು ಬಂದಿದ್ದ ಆರೋಪಿಗಳಿಗೆ ಅಲ್ಲಿ ಏನೂ ಸಿಕ್ಕಿರಲಿಲ್ಲ. ದೇವರ ಚಿನ್ನ ಒಡವೆ ಕದಿಯಲು ಆರೋಪಿಗೆ ಮನಸ್ಸಾಗಲಿಲ್ಲ. ಮಠದಲ್ಲಿದ್ದ ಚಿನ್ನಾಭರಣ ದೇವರಿಗೆ ಸೇರಿದ್ದು, ಪೂಜೆಗೆ ಬಳಸಿರುತ್ತಾರೆ, ಹಾಗಾಗಿ ಅದನ್ನು ಮುಟ್ಟಲಿಲ್ಲ ಎಂದು ಸ್ವತಃ ಆರೋಪಿಗಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇನ್ನು ಯಾವಾಗ ಬಂದ ದಾರಿಗೆ ಸುಂಕವಿಲ್ಲದಂತಾಯ್ತೋ? ಮಠದಲ್ಲಿದ್ದ 50 ಸಾವಿರ ಕ್ಯಾಶ್, ಲ್ಯಾಪ್ಟಾಪ್, ಮೊಬೈಲ್ ಫೋನ್ ಹಾಗೂ ಸಿಸಿ ಕ್ಯಾಮರಾ ಮತ್ತದರ ಡಿವಿಆರ್ ಕಿತ್ತುಕೊಂಡು ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ.