ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್ ಹಾಗೂ ಬೆಂಗಳೂರಿನ ಕಾಜಾಣ ಸಹಯೋಗದಲ್ಲಿ ಡಿ.28ರಂದು ಸಂಜೆ 6.45ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಅಲಿಟಾ ಆಂಡ್ರಿವ್ ರೋಡ್ರಿಗ್ಸ್ ಅಭಿನಯದ ‘ವೃಷಾಲಿ’ ಏಕವ್ಯಕ್ತಿ ದೃಶ್ಯರಂಗ ಕಾವ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ, ಕಾರಣವೇನು
ವೃಷಾಲಿಯನ್ನು ಪದ್ಮಶ್ರೀ ಗೋವಿಂದರಾಜ್ ರಚಿಸಿದ್ದು, ಸಂಗೀತ ವಿನ್ಯಾಸ ಹಾಗೂ ನಿರ್ದೇಶನವನ್ನು ಡಾ.ಬೇಲೂರು ರಘುನಂದನ್ ಮಾಡಿದ್ದಾರೆ. ಈ ನಾಟಕ ಪ್ರದರ್ಶನಕ್ಕೆ 50 ರೂಪಾಯಿ ಪ್ರವೇಶಧನವನ್ನು ನಿಗಧಿಪಡಿಸಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಾಟಕ ಯಶಸ್ವಿಗೊಳಿಸುವಂತೆ ನಾಟಕದ ರಚನೆಕಾರ ಪದ್ಮಶ್ರೀ ಗೋವಿಂದರಾಜ್ ಮನವಿ ಮಾಡಿದ್ದಾರೆ.
Vrishali Solo Play in Shivamogga on Dec 28