SHIVAMOGGA | Jan 6, 2024 | ಹೊಸವರ್ಷದ ಆರಂಭದಲ್ಲಿಯೇ ಶಿವಮೊಗ್ಗದಲ್ಲೊಂದು ದರೋಡೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ತಮ್ಮ ತಾಯಿಯವರನ್ನ ನೋಡಲು ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನ ಅಡ್ಡಗಟ್ಟಿ ರಾಬರಿ ಮಾಡಿದ ಸಂಬಂಧ Act & Section: IPC 1860 (U/s-394) ಅಡಿಯಲ್ಲಿ ತುಂಗಾ ನಗರ ಪೊಲೀಸ್ ಸ್ಟೇಷನ್ (Tunga Nagar Police Station) ನಲ್ಲಿ ಕೇಸ್ ದಾಖಲಾಗಿದೆ.
Tunga Nagar Police Station
ಇಲ್ಲಿನ ಲಗಾನ್ ಕಲ್ಯಾಣ ಮಂದಿರದ ರೋಡ್ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗಿನ ಜಾವ ಘಟನೆ ನಡೆದಿದ್ದರಿಂದ ಈ ಬಗ್ಗೆ ಹೆಚ್ಚಾಗಿ ವಿಚಾರ ಗೊತ್ತಾಗಿರಲಿಲ್ಲ. ಇದೀಗ ಪೊಲೀಸ್ ಕಂಪ್ಲೆಂಟ್ ಆಗಿದ್ದು ಪೊಲೀಸರು ಆರೋಪಿಗಳನ್ನ ಹಿಡಿಯಬೇಕಿದೆ.
READ : Arecanut Rate? ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ ? ಪೂರ್ತಿ ವಿವರ?
ಲಗಾನ್ ಕಲ್ಯಾಣ ಮಂದಿರ ಶಿವಮೊಗ್ಗ/ Lagana Kalyana Mandir Shivamogga’
ಬೆಂಗಳೂರು ಬಸವನಗುಡಿಯಲ್ಲಿರುವ ಬ್ಯಾಂಕ್ವೊಂದರ ಮ್ಯಾನೇಜರ್ ಒಬ್ಬರು, ಶಿವಮೊಗ್ಗದಲ್ಲಿರುವ ತಮ್ಮ ತಾಯಿಯನ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಅವರನ್ನ ಡಿಸ್ಚಾರ್ಜ್ ಮಾಡಿಕೊಂಡು ಬರುವ ಸಲುವಾಗಿ ಮ್ಯಾನೇಜರ್ ಬೆಂಗಳೂರಿನಿಂದ ನೈಟ್ ಬಸ್ ಹತ್ತಿಕೊಂಡು ಶಿವಮೊಗ್ಗಕ್ಕೆ ಬಂದಿದ್ದಾರೆ. ಬಸ್ ನಿಲ್ದಾಣದಿಂದ ಮಹೇಂದ್ರ ಶೋರೂಂನವರೆಗೂ ಆಟೋದಲ್ಲಿ ಬಂದ ಮ್ಯಾನೇಜರ್ ಅಲ್ಲಿಂದ ಲಗಾನ್ ಮಂದಿರ ರೋಡ್ನಲ್ಲಿ ನಡೆದುಕೊಂಡು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ತಮ್ಮ ಮನೆಗೆ ಹೊರಟಿದ್ದಾರೆ.
ಶಿಕಾರಿಪುರಕ್ಕೆ ಹೇಗೆ ಹೋಗಬೇಕು?
ಈ ನಡುವೆ ಬೈಕ್ನಲ್ಲಿ ಬಂದ ಇಬ್ಬರು ಮ್ಯಾನೇಜರ್ ಬಳಿಯಲ್ಲಿ ಶಿಕಾರಿಪುರಕ್ಕೆ ಹೇಗೆ ಹೋಗಬೇಕು ಎಂದು ಅಡ್ರೆಸ್ ಕೇಳಿದ್ದಾರೆ. ಏನೋ ದಾರಿತಪ್ಪಿರಬಹುದು ಎಂದುಕೊಂಡು ಮ್ಯಾನೇಜರ್ ದಾರಿ ತೋರಿದ್ದಾರೆ. ಅವರು ತೋರಿದ ದಿಕ್ಕಿಗೆ ಹೋದ ಆರೋಪಿಗಳು ಮತ್ತೆ ವಾಪಸ್ ಬಂದು ಮಾರಕಾಸ್ತ್ರ ತೋರಿಸಿ ಮ್ಯಾನೇಜರ್ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಮ್ಯಾನೇಜರ್ ಬೆಂಗಳೂರಿನಿಂದ ಬರುವಾಗ 35 ಸಾವಿರ ರೂಪಾಯಿ ತಾಯಿಯ ಡಿಸ್ಚಾರ್ಜ್ಗಾಗಿ ಹಿಡಿದುಕೊಂಡು ಬಂದಿದ್ದರು. ಆ ಹಣ ಹಾಗೂ ಮೊಬೈಲ್ ನ್ನ ಆರೋಪಿಗಳು ರಾಬರಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.