SHIVAMOGGA | Dec 29, 2023 | ಮನೆ ಹಿತ್ತಲಲ್ಲಿ ಗಾಂಜಾ ಕೃಷಿ ಮಾಡ್ತಿದ್ದವನನ್ನ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಹಿಂದೇ ಎಸ್ಪಿ ಲಕ್ಷ್ಮೀಪ್ರಸಾದ್ ಜಿಲ್ಲೆಗೆ ಬರುತ್ತಿದ್ದ ಗಾಂಜಾ ಮಾಲನ್ನ ಲೋಡ್ ಗಟ್ಟಲೇ ಸೀಜ್ ಮಾಡಿದ್ದರು. ಅವರ ನಂತರ ಬಂದ ಎಸ್ಪಿ ಮಿಥುನ್ ಕುಮಾರ್ ಕೂಡ ಮಾದಕವಸ್ತುಗಳ ವಿಚಾರದಲ್ಲಿ ಜಿರೋ ಟಾಲರೆನ್ಸ್ ಎಂದಿದ್ದಾರೆ. ಈ ನಡುವೆ ಗಾಂಜಾ ಪ್ರಕರಣಗಳು ಕಡಿಮೆಯಾದರೂ ಇತ್ತೀಚೆಗೆ ಮಾದಕವಸ್ತುಗಳನ್ನ ಪೊಲೀಸರು ಜಪ್ತು ಮಾಡಿ ರೋಡ್ ಸೈಡ್ನಲ್ಲಿ ಮಾರಾಟ ಮಾಡುವ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದಾರೆ. ಈ ವಾರದಲ್ಲಿಯೇ ತುಂಗಾನಗರ ಪೊಲೀಸರು ಎರಡು ಕೇಸ್ ಹಿಡಿದಿದ್ದಾರೆ.
READ: ಮನೆಯವರು ಸೇರಿಸಿದರೂ, ಊರವರ ಬಹಿಷ್ಕಾರ! ಪ್ರೀತಿಸಿ ಮದುವೆಯಾದವರಿಗೆ ಪೊಲೀಸರ ಕಾವಲು! ಏನಿದು ಸ್ಟೋರಿ!
ಮರಾಠಿಕ್ಯಾಂಪ್ನ ಯುವಕನನ್ನ ಅರೆಸ್ಟ್ ಮಾಡಿದ್ದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಇದೀಗ ಮನೆ ಹಿತ್ತಲಲ್ಲಿ ಗಾಂಜಾ ಬೆಳದಿದ್ದ ಆರೋಪಿಯನ್ನ ಮಾಲು ಸಮೇತ ಹಿಡಿದ್ದಿದ್ದಾರೆ. ದಿನಾಂಕ 28-12-2023 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ನು ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನ ಬೆಳಸ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡವು ರೇಡ್ ನಡೆಸಿದೆ. ಅಲ್ಲದೆ ನಜರತ್ @ ನಜ್ರು ವನ್ನ ಅರೆಸ್ಟ್ ಮಾಡಿದ್ದು, ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಜಪ್ತು ಮಾಡಿದ್ದಾರೆ. ಮಳಲಿಕೊಪ್ಪ ಗ್ರಾಮದ ನಿವಾಸಿ ನಜ್ರು ವಿರುದ್ಧ ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
