Tree fell on bus | ಶಿವಮೊಗ್ಗ ಜಿಲ್ಲೆಯಲ್ಲಿ ದಿಢೀರ್ ಎಂಬಂತೆ ಮಳೆ ಗಾಳಿ ಬರುತ್ತಿದೆ. ಇದರ ನಡುವೆ ಗಾಳಿಗೆ ಲಡ್ಡಾದ ಮರದ ಕೊಂಬೆಗಳು ರಸ್ತೆ ಮೇಲೆಯೇ ಬೀಳುತ್ತಿದ್ದು, ಇದರಿಂದ ವಾಹನ ಸವಾರರಿಗೆ ಆತಂಕದಲ್ಲಿ ಓಡಾಡುವ ಸ್ಥಿತಿಯಿದೆ. ಇನ್ನೂ ಮರದ ಕೊಂಬೆಯಿಂದ ಅನಾಹುತವಾದ ಬಗ್ಗೆ ಜಿಲ್ಲೆಯ ಹೊಸನಗರ ತಾಲ್ಲೂಕುನಲ್ಲಿ ವರದಿಯಾಗಿದೆ.
ಇಲ್ಲಿನ ರಿಪ್ಪನ್ ಪೇಟೆಯಲ್ಲಿ ನಿನ್ನೆ ಮಂಗಳವಾರ ಸಂಜೆ ಹೊತ್ತಿಗೆ ಬಸ್ವೊಂದರ ಮೇಳೆ ಬೃಹತ್ ಮರದ ರಂಬೆ ಬಿದ್ದು ವಾಹನ ಜಖಂ ಆಗಿದೆ. ಪಟ್ಟಣದ ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಬಸ್ ಹಾಗೂ ಸ್ಕೂಟಿ ಜಖಂಗೊಂಡಿದೆ.
Tree fell on bus footage : ತಪ್ಪಿದ ಅನಾಹುತ
ನಿನ್ನೆ ದಿನ ಸಂಜೆ ಆರು ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಖಾಸಗಿ ಬಸ್ ಬಂದಿತ್ತು. ಬಸ್ ಸ್ಟ್ಯಾಂಡ್ ಬಳಿಯಲ್ಲಿ ಪ್ರಯಾಣಿಕರಿದ್ದರು. ಇದೇ ವೆಳೆ ಕೊಂಬೆ ಬಿದ್ದಿದೆ. ಬಸ್ನ ಒಂದು ಭಾಗ ಕೊಂಬೆ ಬಿದ್ದು ಜಖಂ ಆಗಿದೆ. ಘಟನೆಯಲ್ಲಿ ತಾಯಿ ಮಗುವಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಉಳಿದ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಇನ್ನೂ ಘಟನೆಯನ್ನು ಕಣ್ಣಾರೆ ನೋಡಿದ ಸ್ಥಳೀಯರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದರು. ಆನಂತರ ಕೊಂಬೆ ಕಡಿದು ವಾಹನಗಳನ್ನು ಸರಿಸಿ, ರಸ್ತೆಯಲ್ಲಿ ವೆಹಿಕಲ್ಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.