ತಾಳಗುಪ್ಪ-ಕೆಎಸ್‌ಆರ್, ಶಿವಮೊಗ್ಗ ತುಮಕೂರು ಟ್ರೈನ್ ಸೇರಿದಂತೆ 2 ದಿನ 20 ಕ್ಕೂ ಹೆಚ್ಚು ರೈಲು ಸಂಚಾರದಲ್ಲಿ ಬದಲಾವಣೆ

train plans affected by the cancellations /ತುಮಕೂರು-ಊರುಕೆರೆ ಮಾರ್ಗದಲ್ಲಿ ರೈಲ್ವೆ ಕಾಮಗಾರಿ: ಶಿವಮೊಗ್ಗ, ಯಶವಂತಪುರ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಗಲಿದೆ ಅಂತಾರ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ /  ತುಮಕೂರು ಮತ್ತು ರಾಯದುರ್ಗ ನಡುವಿನ ನೂತನ ರೈಲು ಮಾರ್ಗ ಯೋಜನೆಯ ಅಂಗವಾಗಿ ತುಮಕೂರು ಹಾಗೂ ಊರುಕೆರೆ ವಿಭಾಗದಲ್ಲಿ ನಾನ್ ಇಂಟರ್ ಲಾಕಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದ್ದು, ಕೆಲ ರೈಲುಗಳ ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದೆ.

ಸಂಪೂರ್ಣವಾಗಿ ರದ್ದಾದ ರೈಲುಗಳ ವಿವರ 

ಮಾರ್ಚ್ 15 ರಂದು ರೈಲು ಸಂಖ್ಯೆ 56202 ಮೈಸೂರು-ಚಾಮರಾಜನಗರ ಪ್ಯಾಸೆಂಜರ್, ರೈಲು ಸಂಖ್ಯೆ 56281 ಚಾಮರಾಜನಗರ-ತುಮಕೂರು ಪ್ಯಾಸೆಂಜರ್, ರೈಲು ಸಂಖ್ಯೆ 16567 ತುಮಕೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ 66569 ಯಶವಂತಪುರ-ತುಮಕೂರು ಮೆಮು ರೈಲುಗಳ ಸಂಚಾರ ರದ್ದಾಗಿದೆ. ಮಾರ್ಚ್ 16 ರಂದು ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್-ತುಮಕೂರು ಎಕ್ಸ್‌ಪ್ರೆಸ್, ರೈಲು ಸಂಖ್ಯೆ 66570 ತುಮಕೂರು-ಯಶವಂತಪುರ ಮೆಮು, ರೈಲು ಸಂಖ್ಯೆ 66573 ಯಶವಂತಪುರ-ತುಮಕೂರು ಮೆಮು ಹಾಗೂ ರೈಲು ಸಂಖ್ಯೆ 66574 ತುಮಕೂರು-ಯಶವಂತಪುರ ಮೆಮು ರೈಲುಗಳ ಸಂಚಾರ ಇರುವುದಿಲ್ಲ. ಅದೇ ರೀತಿ ರೈಲು ಸಂಖ್ಯೆ 56282 ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ಸೇವೆಯು ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ಕಾಲ ರದ್ದಾಗಿದೆ. ರೈಲು ಸಂಖ್ಯೆ 56201 ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸೇವೆಯು ಮಾರ್ಚ್ 16 ಮತ್ತು 17 ರಂದು ರದ್ದಾಗಿರುತ್ತದೆ.

ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಮೊದಲ ಸಲ ಹಾರಿದ ಏರ್​ ಆ್ಯಂಬುಲೆನ್ಸ್! ಗಾಂಧಿ ಬಜಾರ್ ನಿವಾಸಿ ಮಣಿಪಾಲ್ ಗೆ ಶಿಫ್ಟ್!

train plans affected by the cancellations
train plans affected by the cancellations

ಭಾಗಶಃ ರದ್ದಾದ ರೈಲುಗಳ ಮಾಹಿತಿ

ಮಾರ್ಚ್ 15 ರಂದು ರೈಲು ಸಂಖ್ಯೆ 66571 ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ ಮತ್ತು ತುಮಕೂರು ನಡುವೆ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 66568 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ಸೇವೆಯನ್ನು ತುಮಕೂರು ಮತ್ತು ಹಿರೇಹಳ್ಳಿ ನಡುವೆ ರದ್ದುಪಡಿಸಲಾಗಿದ್ದು, ಈ ರೈಲು ತುಮಕೂರಿನ ಬದಲಾಗಿ ಹಿರೇಹಳ್ಳಿಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ. 

ಮಾರ್ಚ್ 15 ರಂದು ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್-ತುಮಕೂರು ಎಕ್ಸ್‌ಪ್ರೆಸ್ ಸೇವೆಯನ್ನು ಅರಸೀಕೆರೆ ಮತ್ತು ತುಮಕೂರು ನಡುವೆ ರದ್ದುಗೊಳಿಸಲಾಗಿದ್ದು, ಈ ರೈಲು ಅರಸೀಕೆರೆಯವರೆಗೆ ಮಾತ್ರ ಸಂಚರಿಸಲಿದೆ. ಮಾರ್ಚ್ 15 ಮತ್ತು 16 ರಂದು ರೈಲು ಸಂಖ್ಯೆ 66567 ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಹಿರೇಹಳ್ಳಿ ಹಾಗೂ ತುಮಕೂರು ನಡುವೆ ರದ್ದಾಗಲಿದ್ದು, ಹಿರೇಹಳ್ಳಿಯವರೆಗೆ ಮಾತ್ರ ಚಲಿಸಲಿದೆ. ಅದೇ ದಿನಾಂಕಗಳಂದು ರೈಲು ಸಂಖ್ಯೆ 66572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ತುಮಕೂರು ಹಾಗೂ ಹಿರೇಹಳ್ಳಿ ನಡುವೆ ರದ್ದಾಗಲಿದ್ದು, ಹಿರೇಹಳ್ಳಿ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.

ಮಾರ್ಚ್ 16 ರಂದು ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಅರಸೀಕೆರೆ ಹಾಗೂ ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. 

train plans affected by the cancellations
train plans affected by the cancellations
  • ಮಾರ್ಚ್ 16 ರಂದೇ ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲನ್ನು ಕೆಎಸ್‌ಆರ್ ಬೆಂಗಳೂರು ಹಾಗೂ ಅರಸೀಕೆರೆ ನಡುವೆ ರದ್ದುಪಡಿಸಲಾಗಿದ್ದು, ಈ ರೈಲು ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದ ತನ್ನ ಸಂಚಾರವನ್ನು ಆರಂಭಿಸಲಿದೆ. 
  • ಮಾರ್ಚ್ 16 ರಂದು ರೈಲು ಸಂಖ್ಯೆ 66565 ಬಾಣಸವಾಡಿ-ತುಮಕೂರು ಮೆಮು ರೈಲು ಹಿರೇಹಳ್ಳಿ ಮತ್ತು ತುಮಕೂರು ನಡುವೆ ರದ್ದಾಗಲಿದ್ದು, ಹಿರೇಹಳ್ಳಿಯವರೆಗೆ ಮಾತ್ರ ಸೀಮಿತವಾಗಲಿದೆ.
  • ಇದೇ ದಿನದಂದು ರೈಲು ಸಂಖ್ಯೆ 66561 ತುಮಕೂರು-ಯಶವಂತಪುರ ಮೆಮು ರೈಲನ್ನು ತುಮಕೂರು ಮತ್ತು ಹಿರೇಹಳ್ಳಿ ನಡುವೆ ರದ್ದುಗೊಳಿಸಲಾಗಿದ್ದು, ಈ ರೈಲು ತುಮಕೂರಿನ ಬದಲು ಹಿರೇಹಳ್ಳಿಯಿಂದಲೇ ಹೊರಡಲಿದೆ.

ರೈಲುಗಳ ನಿರ್ಗಮನದ ಸಮಯದಲ್ಲಿ ಬದಲಾವಣೆ 

ಮಾರ್ಚ್ 16 ರಂದು ಸಂಚರಿಸಬೇಕಾದ ರೈಲು ಸಂಖ್ಯೆ 20689 ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ 75 ನಿಮಿಷ ತಡವಾಗಿ ಹೊರಡಲಿದೆ. ಮಾರ್ಚ್ 16 ರಂದು ಹೊರಡುವ ರೈಲು ಸಂಖ್ಯೆ 16217 ಮೈಸೂರು-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಮೈಸೂರು ನಿಲ್ದಾಣದಿಂದ 105 ನಿಮಿಷಗಳಷ್ಟು ತಡವಾಗಿ ಚಲಿಸಲಿದೆ. 

ಕಾಮಗಾರಿಯ ಪ್ರಯುಕ್ತ ಕೆಲವು ರೈಲುಗಳ ಸಂಚಾರವನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುವುದು. ಮಾರ್ಚ್ 12 ರಂದು ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ, ಮಾರ್ಚ್ 13 ರಂದು ರೈಲು ಸಂಖ್ಯೆ 17392 ಸಿಂಧನೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು 45 ನಿಮಿಷ ಹಾಗೂ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು. ಮಾರ್ಚ್ 15 ರಂದು ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು 20 ನಿಮಿಷ ಮತ್ತು ಮಾರ್ಚ್ 16 ರಂದು ರೈಲು ಸಂಖ್ಯೆ 20676 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷಗಳ ಕಾಲ ಮಾರ್ಗಮಧ್ಯೆ ತಡೆಹಿಡಿಯಲಾಗುವುದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

train plans affected by the cancellations
train plans affected by the cancellations

ಶಿವಮೊಗ್ಗ:  ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?  

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Are your train plans affected by the cancellations and schedule changes on the Tumakuru-Urukere route due to the new railway line work?