Todays Panchanga and Daily Horoscope / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಬಹುಳ ಬಿದಿಗೆ ತಿಥಿಯು ಸಂಜೆ 4.50ರವರೆಗೆ ಇರಲಿದ್ದು, ತದನಂತರ ತದಿಗೆ ಆರಂಭವಾಗಲಿದೆ. ಉತ್ತರ ನಕ್ಷತ್ರ ಬೆಳಿಗ್ಗೆ 8.15ರವರೆಗೆ ಉತ್ತರ ಇರಲಿದ್ದು, ಬಳಿಕ ಹಸ್ತ ನಕ್ಷತ್ರ ಪ್ರವೇಶವಾಗಲಿದೆ. ರಾತ್ರಿ 3.06ರಿಂದ 4.46ರವರೆಗೆ ಅಮೃತ ಘಳಿಗೆ , ಮಧ್ಯಾಹ್ನ 1.30ರಿಂದ 3.00ರವರೆಗೆ ರಾಹುಕಾಲ ಮತ್ತು ಬೆಳಿಗ್ಗೆ 6.00ರಿಂದ 7.30ರವರೆಗೆ ಯಮಗಂಡ ಕಾಲ ಇರಲಿದೆ.

ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್ಗೆ ಹಾಜರ್ ಸಾಧ್ಯತೆ!
ಇವತ್ತಿನ ರಾಶಿಭವಿಷ್ಯ
ಮೇಷ / ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಆಸ್ತಿ ವಿವಾದ ಬಗೆಹರಿಯಲಿದ್ದು, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ನಿಗದಿತ ಗುರಿಗಳನ್ನು ತಲುಪಲಿದ್ದಾರೆ.
ವೃಷಭ / ಕೆಲಸ ಮುಂದದಕ್ಕೆ ಹೋಗುವುದು,ವಿವಾದ ಎದುರಾಗಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನವಿರಲಿದೆ.ಮಾನಸಿಕ ಅಶಾಂತಿ ಉಂಟಾಗಲಿದೆ.
ಮಿಥುನ / ಕುಟುಂಬದಲ್ಲಿ ಕಿರಿಕಿರಿ. ಅನಿರೀಕ್ಷಿತ ಧನವ್ಯಯ ಹಾಗೂ ವ್ಯಾಪಾರ, ಉದ್ಯೋಗದಲ್ಲಿ ಬದಲಾವಣೆ. ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ಅನಾರೋಗ್ಯದ ಸಮಸ್ಯೆ, ಸಹೋದರರೊಂದಿಗೆ ಕಲಹ.
ಕರ್ಕಾಟಕ / ಹೆಚ್ಚುವರಿ ಆದಾಯ. ಆಪ್ತರೊಂದಿಗೆ ಕಾಲ ಕಳೆಯಲಿದ್ದು, ಸೇವಾ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದು, ಕಾರ್ಯ ಜಯ ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧಿಸುವಿರಿ.
ಸಿಂಹ / ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಂದಗತಿ,ಸೂಕ್ತ ಪ್ರತಿಫಲ ದೊರೆಯುವುದಿಲ್ಲ. ಅಡೆತಡೆ, ಅನಿರೀಕ್ಷಿತ ಖರ್ಚು, ಕನ್ಯಾ / ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅತ್ಯಂತ ಉತ್ಸಾಹದಿಂದ ಸಾಗಲಿವೆ. ಯಶಸ್ಸು, ಆಸ್ತಿ ವಿವಾದಗಳಿಗೆ ಪರಿಹಾರ. ಶುಭ ಕಾರ್ಯ.
ದಾವಣಗೆರೆ ಜಿಲ್ಲೆ ನ್ಯಾಮತಿ ನಿವಾಸಿಗೆ 20 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್! ಕಾರಣ ಇಲ್ಲಿದೆ
ತುಲಾ /ಪ್ರಯಾಣ ಮುಂದೂಡುವುದು ಸೂಕ್ತ. ಜವಾಬ್ದಾರಿಗಳ ಹೊರೆ. ಆದಾಯವು ನಿರಾಸೆ ಮೂಡಿಸಲಿದ್ದು, ಅನಾರೋಗ್ಯದ ಸಮಸ್ಯೆ. ಮನೆಯ ಒಳಗೆ ಮತ್ತು ಹೊರಗೆ ಕಿರಿಕಿರಿ, ವ್ಯಾಪಾರ, ಉದ್ಯೋಗವು ಸಾಧಾರಣ.
ವೃಶ್ಚಿಕ / ಹಮ್ಮಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹಠಾತ್ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದ್ದು, ಆಧ್ಯಾತ್ಮಿಕ ಕಾರ್ಯಕ್ರಮ.
ಧನುಸ್ಸು / ಹೊಸ ತಂತ್ರ ಯಶಸ್ವಿಯಾಗಿ ಜಾರಿಗೆ ತರಲಿದ್ದಾರೆ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಪ್ರಾಪ್ತಿಯ ಯೋಗ, ವ್ಯಾಪಾರ ಮತ್ತು ಕೆಲಸದಲ್ಲಿ ಅನುಕೂಲ.

ಮಕರ / ವ್ಯಾಪಾರ ಮತ್ತು ಉದ್ಯೋಗದಲ್ಲಿ ಬದಲಾವಣೆ. ಬಂಧುಗಳ ಭೇಟಿ, ಪ್ರಯತ್ನಗಳಲ್ಲಿ ಹಿನ್ನಡೆ. ಕೆಲಸಗಳಲ್ಲಿ ವಿಶೇಷ ದಿನ.
ಕುಂಭ / ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ದೈವಚಿಂತನೆ. ಭೂವಿವಾದ ಹಾಗೂ ವ್ಯಾಪಾರ, ಉದ್ಯೋಗದಲ್ಲಿ ತೊಡಕು.
ಮೀನ / ಕಾರ್ಯ ಜಯ , ಧನಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕ, ಶುಭ ಕಾರ್ಯ. ಯೋಗ ಒದಗಿಬರಲಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.


