ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳ ಬಂಧನ! ಕಾರಣವೇನು?

Three fruit vendors from Shivamogga arrested in connection with a case in Davanagere district What is the reason? ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳ ಬಂಧನ! ಕಾರಣವೇನು?

ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳ ಬಂಧನ! ಕಾರಣವೇನು?

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ  ಕಳ್ಳತನ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಮೂಲದ  ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಮೂವರು ಹಣ್ಣಿನ ವ್ಯಾಪಾರಿಗಳಾಗಿದ್ದು, ಆರೋಪಿಗಳ ವಿರುದ್ಧ ಗುರುತರ ಆಪಾದನೆಯು ಕೇಳಿಬಂದಿದೆ. 

ಬಂಧಿತರು

ಹಣ್ಣಿನ ವ್ಯಾಪಾರಿಗಳಾದ ಮಹಮ್ಮದ ಕರೀಂ ಅಲಿಯಾಸ್ ಕರೀಂ (22), ಮಹಮ್ಮದ್ ಹಬಾಜ್ ಅಲಿಯಾಸ್  ಶಾಬಾ (21) ಮತ್ತು  ತಬ್ರೇಜ್ ಅಹಮ್ಮದ್ (36) 

ಆರೋಪಿಗಳಿಂದ ಬೆಲೆಬಾಳುವ ಬಂಗಾರ ವಶ

ಆರೋಪಿಗಳಿಂದ 38 ಗ್ರಾಂ ತೂಕದ ಸುಮಾರು 1,90,000 ಬೆಲೆ ಬಾಳುವ ಬಂಗಾರದ ಆಭರಣಗಳು, ₹3,000 ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಏನಾಗಿತ್ತು.

ಆ.11 ರಂದು ರಾತ್ರಿ ಕಳ್ಳರು ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ನಾಗಮ್ಮ ಮನೆ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000  ರೂ ನಗದು ಹಣ ಹಾಗೂ 2,16,000  ರೂ. ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು