ಗಿಳಿಶಾಸ್ತ್ರ ಹೇಳುತ್ತಿದ್ದವರನ್ನ ಅರೆಸ್ಟ್ ಮಾಡಿದ ಅಧಿಕಾರಿಗಳ ತಂಡ! ಕಾರಣವೇನು ಗೊತ್ತಾ?

SHIVAMOGGA  |  Jan 9, 2024  |  ಇತ್ತೀಚೆಗೆ ಹುಲಿ ಉಗುರು ಮೇಲಿದ್ದ ಇಲಾಖೆಗಳ  ಕಣ್ಣು ಇದೀಗ ಗಿಳಿಶಾಸ್ತ್ರ ಹೇಳುವವರ ಮೇಲೂ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಗಿಳಿಶಾಸ್ತ್ರ ಹೇಳುವವರ ಬಳಿಯಲ್ಲಿ ಇದ್ದ ಎರಡು ಗಿಳಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. 

ಗಿಳಿಶಾಸ್ತ್ರ

ಇತ್ತೀಚೆಗೆ ಗಿಳಿಶಾಸ್ತ್ರ ಹೇಳುವವರು ಸಿಟಿ ಕಡೆಗಳಲ್ಲಿ ಕಡಿಮೆಯಾಗಿದ್ದು ಹಳ್ಳಿಗಳಲ್ಲಿ ಇವರ ತಿರುಗಾಟ ಕಾಣಸಿಗುತ್ತಿದೆ. ಹಾಗೆ ರಿಪ್ಪನ್​ಪೇಟೆ ಬಳಿ  ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರು ಸಾಗರ ಅರಣ್ಯ ಸಂಚಾರಿ ದಳದ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಇಲ್ಲಿನ ಕೆರೆಹಳ್ಳಿ ಕ್ರಾಸ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರ ಬಳಿಯಲ್ಲಿ ಅರಣ್ಯ ಇಲಾಖೆಯು ಹೇಳುವಂತೆ ಅಪರೂಪದ ಸಂರಕ್ಷಿತ ಉಂಗುರದ ಗಿಳಿಗಳು ಪತ್ತೆಯಾಗಿವೆ.  ಇವುಗಳನ್ನ ಇಂಗ್ಲೀಷ್​ನಲ್ಲಿ Rose-ringed parakeet ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ಕಾಣಸಿಗುವ ಇವುಗಳನ್ನ ಪಳಗಿಸಿ ಗಿಳಿಶಾಸ್ತ್ರ ಹೇಳಲು ಬಳಸಿಕೊಳ್ಳುವುದು ಅಪರಾಧ

ಈ ಹಿನ್ನೆಲೆಯಲ್ಲಿ ಗಿಳಿಗಳನ್ನ ವಶಕ್ಕೆ ಪಡೆದ ತಂಡದ ಅಧಿಕಾರಿಗಿಳು ಇಬ್ಬರ ವಿರುದ್ಧ  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. 

Leave a Comment