ಮೈಸೂರು | ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪವಿರುವ ಯುವರಾಜ ಗ್ಯಾಲಕ್ಸಿ ಲಾಡ್ಜ್ನ ಹಿಂಭಾಗದ ಕಾರಿಡಾರ್ನಲ್ಲಿ, ಆರ್ಎಫ್ಒ ಒಬ್ಬರ ಮೃತದೇಹ ಪತ್ತೆಯಾಗಿದೆ. ತಿರುಮಕೂಡಲು ನರಸೀಪುರ ಸಾಮಾಜಿಕ ಅರಣ್ಯ ವಲಯದ ಆರ್ಎಫ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ (32) ಅವರ ಮೃತದೇಹ ನಿನ್ನೆ ದಿನ ಸೋಮವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಮೂಲದವರಾದ ಕಾಂತರಾಜ್ ಅವರು, ಕೇವಲ 15 ದಿನಗಳ ಹಿಂದಷ್ಟೇ ಚಾಮರಾಜನಗರ ಜಿಲ್ಲೆಯ ಕೌದಳ್ಳಿ ವಲಯದಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದರು. ಮೃತರಿಗೆ ಪತ್ನಿ ಹಾಗೂ 3 ತಿಂಗಳ ಅವಳಿ ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಶಬರಿಮಲೆಯಲ್ಲಿ ಶಿವಮೊಗ್ಗ ಭಕ್ತರ ಸಂಕಷ್ಟ! ಸನ್ನಿದಾನದಿಂದಲೇ ಸಿಎಂ, ಡಿಸಿಎಂರ ಸಹಾಯ ಹಸ್ತ ಬೇಡಿದ ಸ್ವಾಮಿಗಳು
ಮೈಸೂರಿನ ಲಾಡ್ಜ್ನಲ್ಲಿ!?
ಭಾನುವಾರ ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಎಂಬುವವರು ಇದೇ ಲಾಡ್ಜ್ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದು, ಅಲ್ಲಿಗೆ ಮೃತ ಅಧಿಕಾರಿ ಕಾಂತರಾಜ್ ಕೂಡ ಬಂದಿದ್ದರು ಎಂದು ತಿಳಿದುಬಂದಿದೆ. ಕೊಠಡಿಯಲ್ಲಿ ಮದ್ಯಪಾನ ಮಾಡಿ ಗಲೀಜು ಮಾಡಿದ್ದರಿಂದ ಕುಪಿತಗೊಂಡ ಲಾಡ್ಜ್ ಸಿಬ್ಬಂದಿ, ತಡರಾತ್ರಿ 2.30 ರ ಸುಮಾರಿಗೆ ಕೊಠಡಿಯಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿದ್ದರು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ನಿನ್ನೆ ಸೋಮವಾರ ಆರ್ಎಫ್ಒರವರ ಮೃತದೇಹ ಪತ್ತೆಯಾಗಿದೆ. ಇನ್ನೂ ಮೃತರ ಮೂಗಿನಿಂದ ರಕ್ತ ಸುರಿದಿದ್ದು, ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಘಟನಾ ಸ್ಥಳಕ್ಕೆ ಎಸಿಪಿ ರಾಜೇಂದ್ರ ಹಾಗೂ ಇನ್ಸ್ಪೆಕ್ಟರ್ ಲೋಲಾಕ್ಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ವರದಿ ಬಂದಿದೆ.

ಮೈಸೂರಿನ ಲಾಡ್ಜ್ ಬಳಿ ಆರ್ಎಫ್ಒ ಕಾಂತರಾಜ್ ಚೌಹಾಣ್ ಶಂಕಾಸ್ಪದ ಸಾವು. Suspicious death of RFO Kantharaj Chauhan near a lodge in Mysore.
ಆರ್ಎಫ್ಒ ಸಾವು, ಮೈಸೂರು ಕ್ರೈಂ ನ್ಯೂಸ್, ಲಷ್ಕರ್ ಪೊಲೀಸ್ ಠಾಣೆ, ತಿ.ನರಸೀಪುರ ಅರಣ್ಯ ಇಲಾಖೆ. RFO Death Mysore, Suspicious Death, Mysore Crime News, Lashkar Police Station

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿವಮೊಗ್ಗ ರೌಡಿಸಂ! ರಮೇಶನ ಮೇಲೆ ಕಾಡಾ ಕಾರ್ತಿ ಟೀಂ ಅಟ್ಯಾಕ್?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.