ಸೊರಬ: ಕೆಲಸದ ವಿಚಾರವಾಗಿ ಉಂಟಾದ ಹಳೆಯ ಕಿರಿಕಿರಿ ಹಿನ್ನೆಲೆಯಲ್ಲಿ ಚಾಲಕನೋರ್ವನನ್ನು ಕಂಬಕ್ಕೆ ಕಟ್ಟಿ ಹಾಕಿ ರಾಡ್ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ ಘಟನೆ ಸೊರಬ ಪಟ್ಟಣದ ಮೀನು ಮಾರುಕಟ್ಟೆ ಬಳಿ ನಡೆದಿದೆ. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆಗೆ ಭರ್ಜರಿ ಸಿದ್ಧತೆ; ಮಾರಿಗದ್ದುಗೆಗೆ ಎಸ್.ಪಿ ನಿಖಿಲ್ ಬಿ ಭೇಟಿ.
ಘಟನೆಯ ವಿವರ
ಫೆ 16 ರಂದು ರಾತ್ರಿ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಚಾಲಕ ರಾಣೇಬೆನ್ನೂರಿಗೆ ತೆರಳಿ ಕೋಳಿಗಳನ್ನು ತುಂಬಿಕೊಂಡು ವಾಪಾಸ್ ಬಂದಿದ್ದರು. ಫೆಬ್ರವರಿ 17ರ ಮುಂಜಾನೆ 4:30ರ ಸುಮಾರಿಗೆ ಸೊರಬದ ಮೀನು ಮಾರುಕಟ್ಟೆ ಬಳಿ ವಾಹನ ನಿಲ್ಲಿಸಿ ಕೋಳಿ ಟ್ರೇಗಳ ಹಗ್ಗ ಬಿಚ್ಚುತ್ತಿದ್ದಾಗ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ನಾನು ಹೋಗುತ್ತಿದ್ದ ಕೆಲಸಕ್ಕೆ ನೀನು ಏಕೆ ಹೋದೆ ಎಂದು ಆರೋಪಿಯೊಬ್ಬ ಗಲಾಟೆ ಆರಂಭಿಸಿದ್ದಾನೆ. ನಂತರ ಇನ್ನಿತರೇ 5 ಜನ ಆರೋಪಿಗಳು ಸೇರಿ ಚಾಲಕನನ್ನು ಮಾರುಕಟ್ಟೆಯ ಕಾಂಪೌಂಡ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಡ್, ಕೋಲಿನಿಂದ ಹಲ್ಲೆ; ಜೀವ ಬೆದರಿಕೆ
ಆರೋಪಿಗಳು ಚಾಲಕನಿಗೆ ಕೋಲಿನಿಂದ ಹಾಗೂ ರಾಡ್ನಿಂದ ತಲೆ ಹಾಗೂ ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದಾರೆ. ಗಲಾಟೆ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳಿಯರು =ಜಗಳ ಬಿಡಿಸಿ, ಚಾಲಕನನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೋಗುವ ಮುನ್ನ ಆರೋಪಿಗಳು ಇನ್ನೊಮ್ಮೆ ಡ್ರೈವಿಂಗ್ ಕೆಲಸಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಗಾಯಾಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಸೊರಬ ಪೊಲೀಸರು ಐವರು ಆರೋಪಿಗಳ ಮೇಲೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Soraba Driver Tied to Pole and Brutally Attacked


