SHIVAMOGGA NEWS TODAY

shivamogga news 02-06-2025 : ಮದುವೆಗೆ ತೆರಳಿ ವಾಪಸ್​ ಬಂದವರಿಗೆ ಕಾದಿತ್ತು ಶಾಕ್ | ನಡೆದಿದ್ದೇನು​

Prathapa thirthahalli ನವೀಕರಣ: 02 ಜೂನ್ 2025, 5:09 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

shivamogga news ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಬಂಗಾರವನ್ನು ದೋಚಿರುವ ಘಟನೆ  ಅಣ್ಣಾನಗರದ ನಿವಾಸಿ ನಝೀಮಾ ಬಾನು ಎಂಬುವವರ ಮನೆಯಲ್ಲಿ ನಡೆದಿದೆ.

shivamogga news ಹೇಗಾಯ್ತು ಘಟನೆ

ಮೇ 25 ರಂದು ಅಣ್ಣಾನಗರದ ನಿವಾಸಿ ನಝೀಮ ಬಾನು ಕುಟುಂಬ ಸಮೇತರಾಗಿ ಅಕ್ಕನ ಮನೆಗೆ ಮದುವೆಗೆಂದು ತೆರಳಿದ್ದರು. ಆದಿನ ಯಾರೋ ಕಳ್ಳರು ನಝೀಮ  ಬಾನು ಮನೆಗೆ ನುಗ್ಗಿ ಬಾಗಿಲಿನ ಬೀಗವನ್ನು ಒಡೆದಿದ್ದಾರೆ. ಹಾಗೆಯೇ ಬೀರುವಿನಲ್ಲಿದ್ದ ಮಾಂಗಲ್ಯ ಸರ, ಕಿವಿ ಒಲೆ, ಉಂಗುರ ಸೇರಿದಂತೆ  ಒಟ್ಟು 60 ಗ್ರಾಂ ತೂಕದ 1ಲಕ್ಷ 20 ಸಾವಿರ ಮೌಲ್ಯದ ಬಂಗಾರವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರನೇ ದಿನ ಮನೆಗೆ ಬಂದು ನೋಡಿದಾಗ ನಝೀಮಾಗೆ ಕಳ್ಳತನವಾಗಿರುವುದು ತಿಳಿದಿದ್ದು, ತಕ್ಷಣ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. 

 

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.