bhadravathi police : ನಕಲಿ ಬಂಗಾರವನ್ನು ತೋರಿಸಿ ಅಸಲಿ ಬಂಗಾರವೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ರಾಮಪ್ಪ (65) ಬಂಧಿತ ಆರೋಪಿಯಾಗಿದ್ದಾರೆ.

bhadravathi police : ಏನಿದು ಪ್ರಕರಣ
ವಿಜಯನಗರ ಜಿಲ್ಲೆಯ ರಾಜೇಶ್ ಎಂಬುವವರಿಗೆ ಜುಲೈ 2024 ರಂದು ಆರೋಪಿ ರಾಮಪ್ಪ ಸುರೇಶ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದ. ನಂತರ ಆತ ರಾಜೇಶ್ಗೆ ನಕಲಿ ಬಂಗಾರವನ್ನು ತೋರಿಸಿ ಅಸಲಿ ಬಂಗಾರವೆಂದು ನಂಬಿಸಿ ಮೋಸ ಮಾಡಿದ್ದಾನೆ. ಈ ಹಿನ್ನಲೆ ರಾಜೇಶ್ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧನೆ ನಡೆಸಿದ್ದರು.
ಪ್ರಕರಣದ ಆರೋಪಿ ರಾಮಪ್ಪ (65) ಇದೀಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 3 ಲಕ್ಷದ 8 ಸಾವಿರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
