ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು?

Another case of theft has taken place in Shimoga Doddapete police station ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ

ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್!  ಮೌನಕ್ಕೆ ಶರಣಾದ್ರಾ ಪೊಲೀಸರು?

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

SHIVAMOGGA |  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸುತ್ತಿದೆಯಾ ಎಂಬುದೊಂದು ಅನುಮಾನ ಕಾಡ ತೊಡಗಿದೆ. ಏಕೆಂದರೆ, ಶಿವಮೊಗ್ಗ ಬಸ್​ಸ್ಟ್ಯಾಂಡ್​ ಸುತ್ತಮುತ್ತ ನಿರಂತರ ಕಳ್ಳತನಗಳು ನಡೆಯುತ್ತಿದ್ದು, ಸರಗಳ್ಳತನ, ಮೊಬೈಲ್ ರಾಬರಿ ಪ್ರಕರಣಗಳು ಸರಣಿ ಲೆಕ್ಕದಲ್ಲಿ ನಡೆಯುತ್ತಿದೆ. ಬಹುತೇಕ ಪ್ರಕರಣಗಳು ದಾಖಲಿಸುತ್ತಿಲ್ಲ ಎಂಬ ಆರೋಪದ ನಡುವೆ KSRTC  ಬಸ್ ನಿಲ್ದಾಣದಲ್ಲಿ ಜನರ ರಶ್ ನಡುವೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಮೌಲ್ಯ ಕೋಟಿ ಹತ್ತಿರ ಬರುತ್ತಿದೆ. 

ಇದೆಲ್ಲದರ ನಡುವೆ ಶಿವಮೊಗ್ಗ ಬಸ್​ ಸ್ಟ್ಯಾಂಡ್​ನಲ್ಲಿಯೇ ಜನ ಸಂದಣಿಯ ನಡುವೆ ಅಪರಿಚಿತನೊಬ್ಬ ಯುವತಿ ಕುತ್ತಿಗೆ ಕೈ ಹಾಕಿ ಬಂಗಾರದ ಸರ ದೋಚಿಕೊಂಡು ಪರಾರಿಯಾಗಿದ್ದಾನೆ. ಸಂಜೆ ಐದು ಗಂಟೆಗೆ ನಡೆದ ಘಟನೆ ಬಗ್ಗೆ ತಡವಾಗಿ ವರದಿಯಾಗಿದೆ. ಸುಮಾರು 45 ವರ್ಷದ ವ್ಯಕ್ತಿಯೊಬ್ಬ ಯುವತಿಯೊಬ್ಬರು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ನಿರ್ಗಮನ ಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಫಾಲೋ ಮಾಡಿದ್ದಾನೆ. 

ಸಮಯ ನೋಡಿ ಯುವತಿಯ ಕೊರಳಿನಲ್ಲಿದ್ದ ಬಂಗಾರದ ಸರಕ ಕೈಹಾಕಿದ್ದಾನೆ. ಈ ವೇಳೆ ಯುವತಿ ಕಿರುಚುತ್ತಾ ಸರವನ್ನ ಹಿಡಿದುಕೊಂಡಿದ್ದಾಳೆ. ಕಳ್ಳ  ಸರವನ್ನು ಕಿತ್ತುಕೊಂಡು ಸಿಕ್ಕಿದ್ದನ್ನಷ್ಟೆ ಕದ್ದು ಓಡಿದ್ದಾನೆ. ಕಳ್ಳ ಕಳ್ಳ ಎಂದು ಕೂಗಿದರು ಆತನನ್ನ ಯಾರು ಹಿಡಿಯುವ ಕೆಲಸ ಮಾಡಿಲ್ಲ. ಇನ್ನೂ ಟ್ರಾಫಿಕ್ ಪೊಲೀಸರು ಬಸ್​ಸ್ಟ್ಯಾಂಡ್​ ಬಳಿಯಲ್ಲಿಯೇ ಗುಂಪು ಕಟ್ಟಿರುತ್ತಾರೆ. ಅವರುಗಳ ಗಮನಕ್ಕೂ ಈ ಪ್ರಕರಣ ಬಂದಂತಿಲ್ಲ.

ಶಿವಮೊಗ್ಗದಲ್ಲಿ ಸರಗಳ್ಳತನ ಯಾರು ಮಾಡುತ್ತಾರೆ. ಕ್ರೈಂ ಏತಕ್ಕೆ ಹೆಚ್ಚಾಗುತ್ತದೆ. ಅದರ ಹಿನ್ನೆಲೆ ಏನಿರಬಹುದು ಎಂಬುದೆಲ್ಲಾ ಪೊಲೀಸರಿಗೆ ಗೊತ್ತಿರದ ವಿಚಾರವೇನಲ್ಲ. ಆದರೆ ಗಮನ ಹರಿಸಬೇಕಿದೆಯಷ್ಟೆ 

 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!