ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಮಹಾದೇವಿ ಟಾಕೀಸ್ ರೈಲು ನಿಲ್ದಾಣ ಅಥವಾ ವಿದ್ಯಾನಗರ ರೈಲು ನಿಲ್ದಾಣ, ಶಿವಮೊಗ್ಗ ಹಳೆಯ ರೈಲ್ವೆ ಸ್ಟೆಷನ್ ಎಂದೆಲ್ಲಾ ಕರೆಯಲ್ಪಡುವ ವಿದ್ಯಾನಗರದ ಬಳಿ ಇರುವ ಶಿವಮೊಗ್ಗ ಹಾಲ್ಟ್ ರೈಲ್ವೆ ಸ್ಟೇಷನ್ನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ರೈಲ್ವೆ ಪೊಲೀಸರು ಬಹಳ ಬೇಗನೇ ಪತ್ತೆ ಮಾಡಿದ್ದಾರೆ.
ಫೆಬ್ರವರಿ 10.02.2026, ವಿದ್ಯಾನಗರ ರೈಲ್ವೆ ಸ್ಟೇಷನ್ನಲ್ಲಿ ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ರೈಲ್ವೆ ಇಲಾಖೆಯ ನೆರವಿನ ಆಪ್ನಲ್ಲಿ ಜನಸಾಮಾನ್ಯರು ತಮ್ಮ ಅನುಭವ ಹಂಚಿಕೊಂಡ ಬಳಿಕ ಮೀಡಿಯಾಕ್ಕೆ ಬಂದಿತ್ತು. ಆನಂತರ ರಾಷ್ಟ್ರೀಯ ಮಾಧ್ಯಮಗಳು ಸಹ ರೈಲ್ವೆ ನಿಲ್ದಾಣದಲ್ಲಿ ನಡೆದ ದರೋಡೆಯ ವಿಚಾರವನ್ನು ಸಮಗ್ರ ಮಾಹಿತಿಯೊಂದಿಗೆ ವಿವರಿಸಿದ್ದವು.

ಇದೀಗ ಪ್ರಕರಣ ಸಂಬಂಧ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದು ಶಿವಮೊಗ್ಗ (SME) ಹಾಲ್ಟ್ ನಿಲ್ದಾಣದ 16582 ಶಿವಮೊಗ್ಗ-ಯಶವಂತಪುರ ಎಕ್ಸ್ಪ್ರೆಸ್ ರೈಲು ನಿಂತಿದ್ದಾಗ, ರೈಲಿನ ಬೋಗಿಯೊಳಕ್ಕೆ ನುಗ್ಗಿದ ಆಗಂತುಕ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದನಷ್ಟೆ ಅಲ್ಲದೆ, ಪ್ರಯಾಣಿಕರೊಬ್ಬರನ್ನ ದರೋಡೆ ಮಾಡಿ ಎಸ್ಕೆಪ್ ಆಗಿದ್ದ. ಈ ಪ್ರಕರಣ ಸಂಬಂಧ ರೈಲ್ವೆ ರಕ್ಷಣಾ ಪಡೆಯ (RPF) ಕಮಾಂಡರ್ ಬಿ.ಕೆ ಪ್ರಕಾಶ ಹಾಗೂ ಜಿಆರ್ಪಿ ಸಬ್-ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದ ತಂಡ ಒಟ್ಟು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದೆ. ಅಲ್ಲದೆ ತನಿಖೆಯನ್ನ ಮುಂದುವರಿಸಿದೆ.

ಶಿವಮೊಗ್ಗ-ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿಯೇ ನಡೆಯಿತೆ ದರೋಡೆ& ಕೊ? ಅನ್ನಪೂರ್ಣ ಕೇಸ್ಲ್ಲಿ ನಡೆದಿದ್ದೇನು?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.