Malnad news today | ಚಿಕ್ಕಮಗಳೂರಲ್ಲಿ ಹುಣಸೋಡು ಬ್ಲಾಸ್ಟ್‌ ರೀತಿಯ ಸ್ಫೋಟ | ಮಲ್ನಾಡ್‌ನ ಇನ್ನಷ್ಟು ಸುದ್ದಿ ಅಪ್‌ಡೇಟ್‌

This Article Written by / 13 / ಜನವರಿ 26, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 26, 2025 ‌‌ 

ಮಲೆನಾಡು ಸುದ್ದಿ | 01 |  ಚಿಕ್ಕಮಗಳೂರು ಜಿಲ್ಲೆಯ ಜಯಪುರದಲ್ಲಿ ಭದ್ರಾ ಎಸ್ಟೇಟ್‌ ಒಳಗೆ ನುಗ್ಗಿ ದೊಣ್ಣೆ, ಬಂದೂಕಿನೊಂದಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.ಈ ಸಂಬಂಧ ಜಯಪುರ ಪೊಲೀಸರಿಗೆ ದೂರು ಹಾಗೂ ಪ್ರತಿದೂರು ಎರಡು ಸಹ ದಾಖಲಾಗಿದೆ. ಎಸ್ಟೇಟ್‌ನೊಳಗೆ ನುಗ್ಗಿ ಬೆದರಿಕೆ ಹಾಕಿದ ಆರೋಪ ಒಂದುಕಡೆಯಾದರೆ, ಇನ್ನೊಂದು ಕಡೆ ತೋಟದೊಳಗೆ ನುಗ್ಗಿ ಕಾಫಿ ಫಸಲು ದರೋಡೆ ಮಾಡಿದ ದೂರು ದಾಖಲಾಗಿದೆ. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಸದ್ಯ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.

ಮಲೆನಾಡು ಸುದ್ದಿ | 02 | ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ  ಆಲ್ದೂರು ಸಮೀಪದ ಕೂದುವಳ್ಳಿ ಬಳಿ ನಡೆದಿದೆ. ನಿನ್ನೆದಿನ ಅಂದರೆ ಶನಿವಾರ  ಹೂವೇಗೌಡ  ಎಂಬವರು ಕಾಫಿತೋಟದ ಮರಗಸಿ ಮಾಡುವ ಸಲುವಾಗಿ, ಏಣಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕರೆಂಟ್‌ ಲೈನ್‌ಗೆ ಏಟಿ ಟಚ್‌ ಆಗಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಲೆನಾಡು ಸುದ್ದಿ | 03 | ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ್ದ ಹುಣಸೋಡು ಸ್ಫೋಟಕ್ಕೆ ನಾಲ್ಕು ವರ್ಷ. ಇದರ ನಡುವೆ ಇದೇ ಮಾದರಿಯಲ್ಲಿ ಚಿಕ್ಕಮಗಳೂರು ನಾಗರಹಳ್ಳಿ ಸಮೀಪದ ಕಲ್ಲು ಕ್ವಾರಿಯಲ್ಲಿ ಸ್ಫೋಟವೊಂದು ಸಂಭವಿಸಿದೆ. ಕಲ್ಲುಕ್ವಾರಿಯಲ್ಲಿ ಸಂಭವಿಸಿದ ಸಿಡಿತದ ಸದ್ದಿ ಗ್ರಾಮಗಳಲ್ಲಿ 15 ಟಿವಿ ಜಖಂ ಆಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು ಉರುಳಿ ಬಿದ್ದಿದೆ. ಮೇಲ್ಚಾವಣಿ ಶೀಟ್‌ ಬಿರುಕುಬಿದ್ದಿದೆ. ಕಿಟಕಿ ಗಾಜು ಒಡೆದು ಹೋಗಿದೆ. ಭೂಮಿ ಕಂಪಿಸಿದ ಅನುಭವ ಆಗಿದ್ದು, ಕೆಲವು ಮನೆ ಗೋಡೆ ಬಿರುಕುಬಿಟ್ಟಿರುವ ಬಗ್ಗೆ ವರದಿಯಾಗಿದೆ.

SUMMARY |  malnad news today

KEY WORDS |malnad news today

ಮುಂದಿನ ಸುದ್ದಿ ಒದಿ

Leave a Comment