ನ್ಯಾಮತಿಯಲ್ಲಿ ಅಡ್ಡಗಟ್ಟಿ ಸುಲಿಗೆ! ದಾವಣಗೆರೆ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್!

Davanagere Police News   ದಾವಣಗೆರೆ | ಜಿಲ್ಲೆಯ ನ್ಯಾಮತಿ ಮತ್ತು ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಸುಲಿಗೆ ಪ್ರಕರಣದಲ್ಲಿ ಶಿವಮೊಗ್ಗದ ಇಬ್ಬರನ್ನ ಬಂಧಿಸಿದ್ದಾರೆ. 

ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಬಾಳು ಗ್ರಾಮದ ಕಲ್ಲಗಿರಿ ರಂಗನಾಥ ಸ್ವಾಮಿ ಬೆಟ್ಟದ ವಿಂಡ್ ಫ್ಯಾನ್ ಬಳಿ‘, ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದ ನಿವಾಸಿ ಜೀವನ್ ಎಂಬುವವರನ್ನು ಅಡ್ಡಗಟ್ಟಿ 30,000 ರೂಪಾಯಿ ನಗದನ್ನು ಸುಲಿಗೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ  ನ್ಯಾಮತಿ ಪೊಲೀಸರು, ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿಗಳಾದ 27 ವರ್ಷದ ಅಣ್ಣಪ್ಪನಾಯ್ಕ ಹಾಗೂ 26 ವರ್ಷದ ಚೇತನ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಹಾಗೂ 30,000 ರೂಪಾಯಿ ಜಪ್ತು ಮಾಡಿದ್ಧಾರೆ. 

ಸುಲಿಗೆಕೋರರ ಬಂಧನ; ಕಳೆದುಹೋಗಿದ್ದ ಆಭರಣ ಮರಳಿಸಿದ ಪೊಲೀಸರು | Davanagere Police News
Davanagere Police News

ದಾವಣಗೆರೆ, ಚನ್ನಗರಿ, ಶಿವಮೊಗ್ಗ, ಸಾಗರ, ಶಿರಸಿ! ಯಾವ ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ದರ

ಇನ್ನೂ ಬಸವನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಚಿನ್ನಾಭರಣ ಹಾಗೂ ಮೊಬೈಲ್ ಅನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಲಿನಗರದ ನಿವಾಸಿ ಹೈದರಅಲಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ 30 ಗ್ರಾಂ ಚಿನ್ನದ ಆಭರಣಗಳು, 100 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು ಮೊಬೈಲ್ ಇದ್ದ ಬ್ಯಾಗ್ ಅನ್ನು ಕಳೆದುಕೊಂಡಿದ್ದರು. ಪಿಎಸ್ಐ ಪ್ರಮೀಳಮ್ಮ ಹಾಗೂ ಸಿಬ್ಬಂದಿ ಫಕ್ಕದ್ದೀನ್ ಅವರು ತಾಂತ್ರಿಕ ನೆರವು ಮತ್ತು ಮೊಬೈಲ್ ನೆಟ್‌ವರ್ಕ್ ಬಳಸಿ ಬ್ಯಾಗ್​ ಪತ್ತೆಹಚ್ಚಿದ್ದಾರೆ. 

ದಾವಣಗೆರೆ, ಚನ್ನಗರಿ, ಶಿವಮೊಗ್ಗ, ಸಾಗರ, ಶಿರಸಿ! ಯಾವ ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ದರ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಸುಲಿಗೆಕೋರರ ಬಂಧನ; ಕಳೆದುಹೋಗಿದ್ದ ಆಭರಣ ಮರಳಿಸಿದ ಪೊಲೀಸರು | Davanagere Police News
ಸುಲಿಗೆಕೋರರ ಬಂಧನ; ಕಳೆದುಹೋಗಿದ್ದ ಆಭರಣ ಮರಳಿಸಿದ ಪೊಲೀಸರು | Davanagere Police News
ಸುಲಿಗೆಕೋರರ ಬಂಧನ; ಕಳೆದುಹೋಗಿದ್ದ ಆಭರಣ ಮರಳಿಸಿದ ಪೊಲೀಸರು | Davanagere Police News
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು