car falls into hemavathi river due to rain / ಮಳೆ ಆರ್ಭಟಕ್ಕೆ ಸೀದಾ ನದಿಗೆ ಉರುಳಿದ ಕಾರುಗಳು!

Malenadu Today

car falls into hemavathi river due to rain

ಮಳೆಯಿಂದಾಗಿ ಮಲೆನಾಡಿನಲ್ಲಿ ವ್ಯಾಪಕ ಹಾನಿಯಾಗುತ್ತಿದೆ. ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ. ಬಣಕಲ್ ಸಮೀಪ ಮಳೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೂರು ಕಾರುಗಳು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೇಮಾವತಿ ನದಿಗೆ ಉರುಳಿವೆ. ಆದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳೀಯರು ಕಾರ್ಯಾಚರಣೆ ನಡೆಸಿ ನದಿಗೆ ಬಿದ್ದಿದ್ದ ಕಾರುಗಳನ್ನು ಮೇಲೆತ್ತಿದ್ದಾರೆ.

ಬಣಕಲ್‌, ಕೊಟ್ಟಿಗೆಹಾರ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಕರೆಂಟ್ ಕಂಬಗಳು ಮುರಿದುಬಿದ್ದಿದೆ. ಇನ್ನೂ ಮಳೆಗಾಳಿಗೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಮಾಡು ಹಾರಿಹೋಗಿರುವ ಬಗ್ಗೆ ವರದಿಯಾಗಿದೆ.  

Share This Article