BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

BREAKING: Shimoga police foil another robbery attempt Four arrested!

BREAKING  :  ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

MALENADUTODAY.COM | SHIVAMOGGANEWS

ಶಿವಮೊಗ್ಗ ಪೊಲೀಸರು ಮತ್ತೊಂದು ದರೋಡೆ ಯತ್ನವನ್ನು ತಡೆಯುವಲ್ಲಿ ಸಫಲರಾಗಿದ್ದಾರೆ. ವಿನೋಬನಗರ ಪೊಲೀಸ್ ಸ್ಟೇಷನ್ (vinoabanagara police station)​ ಲಿಮಿಟ್​ನಲ್ಲಿ ದರೋಡೆಗೆ ಹೊಂಚು ಹಾಕ್ತಿದ್ದವರ ಮೇಲೆ ದಾಳಿ ಮಾಡಿರುವ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. 

ಇದನ್ನು ಸಹ ಓದಿ : ಕಾಡಿನ ಸಮಸ್ಯೆಗಳೇ ಸುಂದರೇಶ್​ರ ಕುಟುಂಬವನ್ನು ಕಾಡಿದವು, ಭಾದಿಸಿದವು..ಜೀವ ಬಲಿ ಪಡೆದವು! ಅರಣ್ಯ ರಕ್ಷಕನ ಹೋರಾಟದ ಬದುಕಿನ ವರದಿಯಿದು ! ಜೆಪಿ ಬರೆಯುತ್ತಾರೆ

ಇವತ್ತು ಬೆಳಗ್ಗೆ ಪೊಲೀಸರು ಗಸ್ತಿನಲ್ಲಿದ್ದಾಗ, ತುಂಗಾ ಚಾನಲ್​ ಬಳಿ, ಮಾರಕಾಸ್ತ್ರಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡುವ ಜನರನ್ನು ಬೆದರಿಸಿ ದರೋಡೆ ಮಾಡುವುದಕ್ಕೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ವಿನೋಬನಗರ ಪೊಲೀಸ್ ಠಾಣೆ  ಪಿ.ಎಸ್.ಐ ಟಿ.ಡಿ ಸಾಗರಕರ್, ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸ್ ಟೀಂ ಆರೋಪಿಗಳನ್ನು ಬಂಧಿಸಿದೆ. 

ಈ ಸಂಬಂಧ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, ಬಂಧಿತರ ವಿವರ ಹೀಗಿದೆ.

  • 1) ಅನಿಲ್ ಕುಮಾರ್, 42 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ,
  • 2) ಶಿವಾನಾಯ್ಕ್, 34 ವರ್ಷ ಕೋಹಳ್ಳಿ ತಾಂಡ ಶಿವಮೊಗ್ಗ,
  • 3) ಶಿವಕುಮಾರ.ಟಿ, 45 ವರ್ಷ, ಆಯನೂರು, ಶಿವಮೊಗ್ಗ 
  • 4) ಖಲೀಮ್, 30 ವರ್ಷ, ಸಿರಿಗೆರೆ ಗ್ರಾಮ ಶಿವಮೊಗ್ಗ

ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು  ಐಪಿಸಿ 399, 402 ಅಡಿಯಲ್ಲಿ ಕೇಸ್​ ದಾಖಲಿಸಿ, ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  

ಇದನ್ನು ಸಹ ಓದಿ : ಕಾಡಿನ ಬೆಂಕಿ : ಮೇಲಾಧಿಕಾರಿಯ ರಕ್ಷಣೆಗೆ ನಿಂತಾಗ ಅಗ್ನಿಗೆ ಆಹುತಿಯಾದ್ರಾ ಸುಂದರೇಶ್!ಸುಟ್ಟ ಮೈಯಲ್ಲಿಯೇ ಜೀವ ಉಳಿಸಲು 10 ಕಿಲೋಮೀಟರ್​ ಓಡಿಬಂದ ವಾಚರ್​! ಇದು ಯಾರು ಹೇಳದ ಅರಣ್ಯ ರೋಧನದ ಕಥೆ! ಜೆಪಿ ಬರೆಯುತ್ತಾರೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com