protest in shivamogga :  ಪೆಹಲ್ಗಾಮ್ ದಾಳಿಗೆ ಮುಸ್ಲಿಂ ಸಮುದಾಯದ ಖಂಡನೆ..ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಮೌನ ಆಚರಣೆ..ಸಂವಿಧಾನ ಪೀಠಿಕೆ ಪಠಣೆ

protest in shivamogga

protest in shivamogga : ವಕ್ಫ್ ಆಸ್ತಿ ತಿದ್ದುಪಡೆ ಕಾಯ್ದೆ ವಿರೋಧಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ಸಾವಿರಾರು ಮುಸ್ಲಿಂ ಭಾಂದವರಿಂದ ಶಾಂತಿ ಯುತ ಪಾದಯಾತ್ರೆ ನಡೆಯಿತು. ವಕ್ಫ್ ಕಛೇರಿಯಿಂದ ಆರಂಭವಾದ ಪ್ರತಿಭಟನೆ ಜಯನಗರ ಠಾಣೆ ಸನಿಹದ ಬೃಹತ್ ವೇದಿಕೆಯಲ್ಲಿ ಸಮಾಗಮಗೊಂಡಿತು. ಪ್ರತಿಭಟನಾ ಸಭೆಯಲ್ಲಿ ಪೆಹಲ್ಗಾಮ್ ದಾಳಿಯನ್ನು ಖಂಡಿಸಲಾಯಿತು. ದಾಳಿಯಲ್ಲಿ ಸಾವನ್ನಪ್ಪಿದವರಿಗಾಗಿ ಒಂದು ನಿಮಿಷ ಮೌನಾಚಾರಣೆ ನಡೆಸಲಾಯಿತು. ತದನಂತರದಲ್ಲಿ ಸಂವಿಧಾನ ಪೀಠಿಕೆಯನ್ನು ಪಠಿಸಿ,ಪ್ರಮಾಣ ಮಾಡಲಾಯಿತು. ವೇದಿಕೆಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರು ವಕ್ಪ್ ಕಾಯ್ದೆ ತಿದ್ದುಪಡಿಯನ್ನು … Read more

waqf bill protest :  ವಕ್ಫ್​ ಕಾಯ್ದೆ ತಿದ್ದುಪಡಿ ವಿರುದ್ಧ ​ಪ್ರತಿಭಟನೆ | ಪ್ರತಿಭಟನಾಕಾರರ ಆಗ್ರಹಗಳೇನು

waqf  bill

waqf bill protest : ಶಿವಮೊಗ್ಗದಲ್ಲಿ  ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಪ್ರತಿಭಟನಾ ನಡೆಸಲಾಯಿತು. ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಇರುವ ವಕ್ಫ್​ ಕಚೇರಿಯಿಂದ ಶುರುವಾದ ಪ್ರತಿಭಟನಾ ವೆರವಣಿಗೆ. ಜಿಲ್ಲಾಧಿಕಾರಿ ಕಚೇರಿವರೆಗೆ ವರೆಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.  ಹಾಗೆಯೇ ಕೈ ಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಮೋದಿ ಹಠಾವ್​ ದೇಶ್ ಬಚಾವ್​, ವಕ್ಫ್​ … Read more

murder case : ಸುಹಾಸ್​ ಶೆಟ್ಟಿ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಆಕ್ರೋಶ, ಟಯರ್​ ಸುಟ್ಟು ಪ್ರತಿಭಟನೆ

murder case

murder case : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ರಾಜ್ಯದಾಧ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಶಿವಮೊಗ್ಗದಲ್ಲಿ ಶಿವಪ್ಪನಾಯಕನ ಪ್ರತಿಮೆ ಬಳಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಸುಹಾಸ್​ ಶೆಟ್ಟಿ ಅಮರ್​ ರಹೇ, ಕೆಣಕದಿರಿ ಕೆಣಕದಿರಿ ಹಿಂದೂಗಳನ್ನು ಕೆಣಕದಿರಿ, ಎಂಬ ಘೋಷಣೆಯನ್ನು ಕೂಗಿದರು. ನಂತರ ಹತ್ಯೆಯನ್ನು ಖಂಡಿಸಿ ಪ್ರತಿಮೆ ಬಳಿ ಟಯರ್​ನ್ನು  ಸುಡಲಾಯಿತು. ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಕೋರಿ … Read more

bhadravathi accident : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹತ್ತಿನಿಂತ ಕಾರು

bhadravathi accident

bhadravathi accident : ಭದ್ರಾವತಿ ರಸ್ತೆಯ ನಿದಿಗೆ ಸಮೀಪದಲ್ಲಿ ಇಂದು ಬೆಳಿಗ್ಗೆ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ನಿಂತಿದೆ. ಭದ್ರಾವತಿ ಕಡೆಯಿಂದ ಬರುತ್ತಿದ್ದ ಡಸ್ಟರ್​  ಕಾರು ಒಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ಮಣ್ಣಿನ ರಾಶಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ  ಮಣ್ಣಿನಲ್ಲಿದ್ದ ಕಲ್ಲು  ಎದುರಿಗೆ ಬರುತ್ತಿದ್ದ ಲಾರಿಗೆ ತಾಗಿ ಲಾರಿಯ ಗ್ಲಾಸ್​ ಒಡೆದು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರ ಅಪಘಾತದಿಂದ ಪಾರಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ … Read more

suhas shetty murder case : ರಾಜಕೀಯ ನಾಯಕರು ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ | ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ

suhas shetty murder case

suhas shetty murder case : ರಾಜಕೀಯ ನಾಯಕರು ಅವರ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೃತ ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. suhas shetty murder case :  ಇಂತಹ ಅನಾಹುತಗಳಾದಾಗ ಯಾರು ಬರುವುದಿಲ್ಲ ಮಂಗಳೂರಿನ ಬಚ್ಪೆ ಮೂಲದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಯನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ಕೊಚ್ಚಿ ಕೊಲೆ ಮಾಡಿದ್ದರು. ಈ ಹಿನ್ನಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂಬ ಕೂಗು ದಕ್ಷಿಣದ ಕನ್ನಡ ಜಿಲ್ಲೆಯಾಧ್ಯಂತ ಕೇಳಿ … Read more

arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ? 

arecanut poisson

arecanut poisson : ಮಲೆನಾಡು ಭಾಗದಲ್ಲಿ ಈಗಾಗಲೇ ಅಡಿಕೆ ತೊಟಗಳಿಗೆ ಔಷಧಿ ಸಿಂಪಡನೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಹಿಂಗಾರ ಒಡೆದು ಅಡಿಕೆ ನಿಲ್ಲುವ ಸಂದರ್ಭ, ಈ ಸಮಯದಲ್ಲಿ​ ಔಷಧಿ ಸಿಂಪಡನೆ ಮಾಡಿದರೆ ಉತ್ತಮ ಫಸಲು  ಬರುತ್ತದೆ ಎಂಬುದು ರೈತರ ನಂಬಿಕೆ. ಇದರ ನಡುವೆ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ಕೆಲಸಗಾರರಿಗೆ ಇದೊಂದು ಹೆಚ್ಚು ಲಾಭ ಗಳಿಸುವಂತಹ ಸೀಜನ್​ ಎಂದು ಹೇಳಬಹುದು. ಆದ್ದರಿಂದ ಕೊನೆಗಾರರು ಒಂದು ಡ್ರಂ ಔಷಧಿಗೆ ಪಡೆಯುವ ಹಣವೆಷ್ಟು, ಔಷಧಿ  ಸಿಂಪಡನೆಯಿಂದ ಅವರ ಆರೋಗ್ಯದ … Read more

missing case shivamogga : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

missing case shivamogga ಕಾಣೆಯಾದ ಇಬ್ಬರು ಮಹಿಳೆಯರು

missing case shivamogga : ಇಬ್ಬರು ಮಹಿಳೆಯರು ಶಿವಮೊಗ್ಗ ದೊಡ್ಡ ಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದು, ದೂರಿನನ್ವಯ ಮಾಹಿತಿಗಾಗಿ ಪೊಲೀಸ್​ ಪ್ರಕಟಣೆ ಹೊರಡಿಸಿದೆ. ನಗರದ ಹೊಸಮನೆ 5ನೇ ತಿರುವಿನಲ್ಲಿ ವಾಸವಿರುವ ಮಹೇಶ ಎಂಬುವವರ ಪತ್ನಿ ಆಶಾ ಎಂಬ ಮಹಿಳೆ ಜನವರಿ 29 ರಂದು ಮನೆಯಿಂದ ಕಾಣೆಯಾಗಿದ್ದು, ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ತಲೆ ಕೂದಲು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು … Read more

murder case : ಮಂಗಳೂರು ಸುಹಾಸ್​ ಶೆಟ್ಟಿ ಕೊಲೆ ಪ್ರಕರಣ, ಶಿವಮೊಗ್ಗದಲ್ಲಿ ಯಾರ್ಯಾರು ಏನೇನು ಹೇಳಿದರು

murder case

murder case : ಮಂಗಳೂರಿನಲ್ಲಿ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಹೋಗಿರುವುದೇ ಕಾರಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಈ ಕುರಿತು ಮಾತನಾಡಿರುವ ಅವರು ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ  ಹೆಚ್ಚಾಗಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಹಾಗೆಯೇ ಮಂಗಳೂರಿನಲ್ಲಿ ಮುಸ್ಲಿಂ ಕೋಮುವಾದಿ ಸಂಘಟನೆಗಳು ತುಂಬಾ ಸಕ್ರಿಯವಾಗಿ … Read more

Power cut in shivamogga :  ಮೇ 03 ರಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್​

Power Cut in Shivamogga power cut in Machenahalli and Nidige areas on January 21

Power cut in shivamogga : ಶಿವಮೊಗ್ಗ: ಮೇ 03 ರಂದು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 09-00 ರಿಂದ ಸಂಜೆ 05.00ರ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. Power cut in shivamogga : ಎಲ್ಲೆಲ್ಲಿ ಇರಲ್ಲ ಕರೆಂಟ್​ ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ  ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, … Read more

sslc result :  SSLC  ಫಲಿತಾಶ ಪ್ರಕಟ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ | ಶಿವಮೊಗ್ಗ ಜಿಲ್ಲೆಗೆ ಎಷ್ಟನೇ ಸ್ಥಾನ

Shivamogga Power Cable Theft bhadravati

sslc result : ಕರ್ನಾಟಕ ಎಸ್​ ಎಸ್​ ಎಲ್​ ಸಿ ಪರೀಕ್ಷೆ -01 ರ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ರಾಮಕೃಷ್ಣ ಶಾಲೆಯ ನಿತ್ಯಾ ಎಂ. ಕುಲಕರ್ಣಿ,   ಆದಿ ಚುಚಂಚನಗಿರಿ ಶಾಲೆಯ ಸಹಿಷ್ಣು ಎನ್,​ ಹಾಗೂ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ನಮನ ಕೆ ಎಂಬುವ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ ಮಾರ್ಚ್​ 21 ರಿಂದ … Read more