ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು
After attending Pradeep Easwar's programme, a Bcom student who had gone to Sakrebail for lunch died.
SHIVAMOGGA | Jan 21, 2024 | ಶಿವಮೊಗ್ಗಕ್ಕೆ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್ Pradeep Easwar ಕಾರ್ಯಕ್ರಮ ಮುಗಿಸಿಕೊಂಡು ಸಕ್ರೆಬೈಲ್ಗೆ ಹೋಗಿ ಊಟ ಮಾಡಿ ವಾಪಸ್ ಆಗ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಕೊನೆಯವರ್ಷದ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳು ಆ ಬಳಿಕ ಸಕ್ರೆಬೈಲ್ಗೆ Sakrebail ತೆರಳಿದ್ದಾರೆ. ಅಲ್ಲಿ ಕೆಂಪೇಗೌಡ ಹೋಟೆಲ್ನಲ್ಲಿ ಊಟ ಮುಗಿಸಿ ವಾಪಸ್ಸ ಆಗಿದ್ದಾರೆ. ಅಲ್ಲಿಂದ ವಾಪಸ್ ಹೊರಟ ಮೂವರು ಒಂದೇ ಬೈಕ್ನಲ್ಲಿ ಬರುವಾಗ ಮರವೊಂದಕ್ಕೆ ಬೈಕ್ ಡಿಕ್ಕಿಯಾಗಿದೆ.
ಮರಕ್ಕೆ ಡಿಕ್ಕಿಯಾದ ಪರಿಣಾಮ, ಬೈಕ್ನಲ್ಲಿದ್ದ ಪ್ರಜ್ವಲ್ ಹಾಗೂ ಪವನ್ಗೆ ಗಂಭೀರ ಗಾಯಗವಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಪ್ರಜ್ವಲ್ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ.