ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್​ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು

After attending Pradeep Easwar's programme, a Bcom student who had gone to Sakrebail for lunch died.

ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್​ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು
After attending Pradeep Easwar's programme, a Bcom student who had gone to Sakrebail for lunch died.

SHIVAMOGGA  |  Jan 21, 2024  |  ಶಿವಮೊಗ್ಗಕ್ಕೆ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್ Pradeep Easwar ಕಾರ್ಯಕ್ರಮ ಮುಗಿಸಿಕೊಂಡು ಸಕ್ರೆಬೈಲ್​ಗೆ ಹೋಗಿ ಊಟ ಮಾಡಿ ವಾಪಸ್ ಆಗ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗ ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಕೊನೆಯವರ್ಷದ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. 

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳು ಆ ಬಳಿಕ ಸಕ್ರೆಬೈಲ್​ಗೆ Sakrebail ತೆರಳಿದ್ದಾರೆ. ಅಲ್ಲಿ ಕೆಂಪೇಗೌಡ ಹೋಟೆಲ್​ನಲ್ಲಿ ಊಟ ಮುಗಿಸಿ ವಾಪಸ್ಸ ಆಗಿದ್ದಾರೆ. ಅಲ್ಲಿಂದ ವಾಪಸ್ ಹೊರಟ ಮೂವರು ಒಂದೇ ಬೈಕ್​ನಲ್ಲಿ ಬರುವಾಗ ಮರವೊಂದಕ್ಕೆ ಬೈಕ್ ಡಿಕ್ಕಿಯಾಗಿದೆ.

ಮರಕ್ಕೆ ಡಿಕ್ಕಿಯಾದ ಪರಿಣಾಮ, ಬೈಕ್​ನಲ್ಲಿದ್ದ ಪ್ರಜ್ವಲ್​ ಹಾಗೂ ಪವನ್​ಗೆ ಗಂಭೀರ ಗಾಯಗವಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಪ್ರಜ್ವಲ್ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ.