Shivamogga district : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಭೀಮನಕೋಣೆ ಬಳಿ ಬರುವ ಕೆರೆಯಲ್ಲಿ ಈಜುತ್ತಿದ್ದ ಮೂವರ ಪೈಕಿ ಓರ್ವ ನೀರುಪಾಲಾಗಿದ್ದಾನೆ. ಸದ್ಯ ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಸಾಗರ ತಾಲ್ಲೂಕಿನ ರಾಮನಗರದ ನಿವಾಸಿ ಯಶವಂತ್ ಎಂಬಾತ ನೀರುಪಾಲಾಗಿದ್ದಾನೆ. ಈತ ಸಾಗರ ತಾಲ್ಲೂಕಿನ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಹಾಗು ಈಜುಗಾರರು ಹುಡುಕಾಟ ನಡೆಸ್ತಿದ್ದಾರೆ.
ಯಶವಂತ್ ಹಾಗೂ ಆತನ ಇಬ್ಬರು ಸ್ನೇಹಿತರು ಇಲ್ಲಿನ ಭೀಮನಕೋಣೆಯ ಕೆರೆಯಲ್ಲಿ ಈಜಲು ಇವತ್ತು ಬೆಳಗ್ಗೆ ತೆರಳಿದ್ದರು. ಮೂವರು ಈಜುವುದನ್ನ ಈಗೀಗಷ್ಟೆ ಕಲಿಯುತ್ತಿದ್ದರು ಎನ್ನಲಾಗುತ್ತಿದೆ. ಇನ್ನೂ ಮೂವರು ನೀರಿಗಿಳಿದ ಸಂದರ್ಭದಲ್ಲಿ ಯಶವಂತ್ ಕೂಡ ನೀರಿಗೆ ಇಳಿದಿದ್ಧಾನೆ. ಈಜಲು ಇನ್ನೂ ಕಲಿಯುತ್ತಿದ್ದ ಯುವಕ ನೀರುಪಾಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ