Friday, 4 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಕಮಲದೊಳಗೆ ಕುಮಾರ ಪರ್ವ! ಶಿವಮೊಗ್ಗ ಪವರ್‌ ಪಾಲಿಟಿಕ್ಸ್‌ನಲ್ಲಿ ವಸಂತ ಅಶ್ವಮೇಧ

13
Last updated: February 23, 2025 8:17 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗ ರಾಜಕಾರಣ ಮತ್ತೊಂದು ಮಜಲಿನತ್ತ. ಬದಲಾಗುತ್ತಿರುವ ತಲೆಮಾರಿನಲ್ಲಿ, ರಾಜಕಾರಣದಲ್ಲಿ ಎರಡನೇ ಸ್ಥರದ ನಾಯಕರು ಪವರ್‌ ಸೆಂಟರ್‌ನಲ್ಲಿ ಪವರ್‌ ಮ್ಯಾನ್‌ಗಳಿಗೆ ಟಕ್ಕರ್‌ ಕೊಡುತ್ತಿದ್ದಾರೆ.  ಈ ಪೈಕಿ, ಇನ್ಮುಂದೆ ಇದಕ್ಕೆ ನನ್ನದು ಹೊಸ ಲೆಕ್ಕ ಎನ್ನುತ್ತಿದ್ದಾರೆ ಕುಮಾರ್‌ ಬಂಗಾರಪ್ಪ. ಏನಿದು ಏತಕ್ಕೆ ಇದು ಎಂಬುದಕ್ಕೆ ಇಲ್ಲಿದೆ ವಿವರ

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ. ಈ ಮಾತಿಗೆ ರಾಜಕಾರಣದಲ್ಲಿನ ಶಿವಮೊಗ್ಗದ ಘಟಾನುಘಟಿಗಳೇ ಸಾಕ್ಷಿ. ಅದರಲ್ಲಿಯು ಸಾರೆಕೊಪ್ಪ ಬಂಗಾರಪ್ಪ ಬಿಎಸ್‌ ಯಡಿಯೂರಪ್ಪರ ನಡುವಿನ ರಾಜಕೀಯ ಪೈಪೋಟಿ ಇಡೀ ರಾಜ್ಯದಲ್ಲಿ ಪ್ರದರ್ಶನಗೊಂಡಿರುವುದು ಎಲ್ಲರಿಗೂ ಗೊತ್ತಿರುವಂತದ್ದೆ. ಈ ಪೈಪೋಟಿಯಲ್ಲಿ ಇದೀಗ ಹೊಸ ಎಂಟ್ರಿ ತೆಗೆದುಕೊಂಡಿರುವುದು ಕುಮಾರ್‌ ಬಂಗಾರಪ್ಪ. ಅತ್ತ ಕಾಂಗ್ರೆಸ್‌ನಲ್ಲಿ ತಮ್ಮ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಸ್ಟ್ರಾಂಗ್‌ ಹೋಲ್ಡ್‌ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿ ಸದ್ಯ ಅವರದ್ದೆ ಕೈ ನಡೆಯುತ್ತಿದೆ. ಇತ್ತ ಸೊರಬದಲ್ಲಿ ತಮ್ಮನಿಂದ ಸೋತ ಕುಮಾರ್‌ ಬಂಗಾರಪ್ಪ ಕೆಲವು ದಿನ ಸೈಲೆಂಟ್‌ ಆಗಿದ್ದರು. ಆದರೆ ಇದೀಗ ಹೈಫರ್‌ ಆಕ್ಟೀವ್‌ ಆಗಿದ್ದಾರೆ. ಬಿಜೆಪಿ ಶುದ್ಧಿಕರಣ ಚಳವಳಿಗೆ ತಮ್ಮದೆ ಮನೆಯನ್ನು ವೇದಿಕೆಯಾಗಿ ಒದಗಿಸಿರುವ ಅವರ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದ  ಸೆಂಟರ್‌ ಪಾಯಿಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯೇ ಸಾಕ್ಷಿ. ಯುತ್ನಾಳಗೆ ಬಂದ ಹೈಕಮಾಂಡ್‌ ನೋಟಿಸಿನಿಂದ ಮಾತು ಆರಂಭಿಸಿದ ಅವರು ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬೇಕು, ಆ ಸ್ಥಾನ ನನಗೆ ನೀಡಿದರೂ ಸೈ ಒಟ್ನಲ್ಲಿ ಚುನಾವಣೆ ಫಿಕ್ಸ್‌ ಎಂದಿದ್ದಾರೆ. 

ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ವಿರುದ್ಧ  ತಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವುದು ನಿಕ್ಕಿ ಎಂದಿರುವ ಅವರು ಈ ಸಲ ರಾಜ್ಯಾಧ್ಯಕ್ಷರ ಬದಲಾವಣೆ ನೂರಕ್ಕೆ ನೂರು ಆಗುತ್ತದೆ ಚುನಾವಣಾ ಉಸ್ತುವಾರಿ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಜ್ಯಕ್ಕೆ ಬರಬೇಕು, ಚುನಾವಣೆ ವೇಳಾಪಟ್ಟಿ ನಿಗದಿಯಾಗಬೇಕು, ತದನಂತರ ಮುಂದಿನ ವಿಚಾರ ತಿಳಿಯುವುದು ಎಂದಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಚುನಾವಣೆ ನಡೆಯುವರೆಗೂ ನಮ್ಮ ವಾದ ಇದೇ ರೀತಿಯಿರುತ್ತದೆ ಅಂತಾ ಬಿವೈ ವಿಜಯೇಂದ್ರರಿಗೆ ನೇರ ಸವಾಲು ಹಾಕಿದ್ದಾರೆ. 

car decor

ತಮ್ಮನಿಗೆ ಸವಾಲ್‌ ಅಣ್ಣನಿಗೆ ಸಾಥ್‌ 

ಶಾಸಕರಾಗಿದ್ದಾಗಿನಿಂದಲೂ ತಮ್ಮ ವೈಯಕ್ತಿಕ ಪ್ರತಿಷ್ಟೆ ವಿಚಾರದಲ್ಲಿ ರಾಜಿಮಾಡಿಕೊಳ್ಳದ ಕುಮಾರ್‌ ಬಂಗಾರಪ್ಪ, ಆಗಾಗ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಳ್ತಾನೆ ಇದ್ದರು. ಆಗೆಲ್ಲಾ ಸಂಸದ ಬಿವೈ ರಾಘವೇಂದ್ರ ಖುದ್ದು ಕುಮಾರ್‌ ಬಂಗಾರಪ್ಪನವರ ಮನೆಗೆ ಹೋಗಿ ಸಮಾಧಾನ ಮಾಡುತ್ತಿದ್ದರು. ಆನಂತರ ಶಾಸಕ ಸ್ಥಾನದ ಚುನಾವಣೆ ವೇಳೆ ನಮೋ ವೇದಿಕೆ ಕುಮಾರ್‌ ಬಂಗಾರಪ್ಪರನ್ನ ಬಿಡದೇ ಕಾಡಿತು, ಸೋಲಿಗೂ ಒಂಚೂರು ಕಾರಣವಾಯ್ತು. ಆನಂತರ ಸೈಲೆಂಟ್‌ ಆದ ಕುಮಾರ್‌ ಬಂಗಾರಪ್ಪ, ಎಂಪಿ ಎಲೆಕ್ಷನ್‌ ಪ್ರಚಾರಕ್ಕೆ ಬಿಜೆಪಿ ಪರವಾಗಿ ಬರೋದಿಲ್ಲ ಎಂದೇ ಯೋಚಿಸಲಾಗಿತ್ತು. ಅಲ್ಲದೆ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ಗೆ ಬರುತ್ತಾರೆ, ಅವರೇ ಬಿವೈಆರ್‌ ವಿರುದ್ಧ ನಿಲ್ಲುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅಂತಹದ್ದೊಂದು ಪ್ರಯತ್ನ ಮಧು ಬಂಗಾರಪ್ಪರವರ ಹಠ ಸಾಧನೆಯಿಂದ ನಿಂತಿತು ಎನ್ನುತ್ತದೆ ರಾಜಕಾರಣ. 

ಈ ಮಧ್ಯೆ ದಿಢೀರ್‌ ಅಲರ್ಟ್‌ ಆದ ಕುಮಾರ್‌ ಬಂಗಾರಪ್ಪ ರಾಷ್ಟ್ರೀಯ ನಾಯಕರು ಶಿವಮೊಗ್ಗಕ್ಕೆ ಬರಲು ಆರಂಭಿಸುತ್ತಲೇ ಅವರೊಂದಿಗೆ ಸರ್‌ಪ್ರೈಸ್‌ ಎಂಟ್ರಿ ಕೊಟ್ಟರು. ಬಿವೈ ರಾಘವೇಂದ್ರರ ಬೆನ್ನಿಗೆ ನಿಂತು ಜೈ ಎಂದು ಬಿಡಿ ಎಂದ ಅವರು, ಸಚಿವ ಮಧು ಬಂಗಾರಪ್ಪರವರ ಕ್ಷೇತ್ರದಲ್ಲಿ‌, ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ಬಿವೈಆರ್‌ಗೆ ದೊಡ್ಡ ಲೀಡ್‌ ತಂದುಕೊಟ್ರು. ಇದು ಕುಮಾರ್ ಬಂಗಾರಪ್ಪರವರ ಪವರ್‌ ಎಂಬ ಮಾತು ಆ ಹೊತ್ತಲ್ಲಿ ಕೇಳಿದ್ದು ನಿಜ. ಹೀಗೇ ಬಿವೈಆರ್‌ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದ ಕುಮಾರ್‌ ಬಂಗಾರಪ್ಪ ಇದೀಗ  ರಾಘವೇಂದ್ರರ ಸಹೋದರ ಬಿವೈ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. 

ಮೊದಲಿನಿಂದಲೂ ಬಿವೈ ವಿಜಯೇಂದ್ರರ ಜೊತೆ ಅಷ್ಟಾಗಿ ವೇದಿಕೆ ಹಂಚಿಕೊಳ್ಳದ ಕುಮಾರ್‌ ಬಂಗಾರಪ್ಪರಿಗೆ ಬಿಜೆಪಿಯ ದೊಡ್ಡ ಬಣವೊಂದು ನೇರವಾಗಿ ಸಪೋರ್ಟ್‌ ಮಾಡುತ್ತಿದೆ. ಆ ಶಕ್ತಿಯಿಂದಲೇ ಕುಮಾರ್‌ ಬಂಗಾರಪ್ಪ ವಿಜಯೇಂದ್ರರ ಬದಲಾವಣೆ ಕಾಲ ಬಂದಿದೆ ಎನ್ನುತ್ತಿದ್ದಾರೆ. ಅವರ ಈ ನಡೆ ಶಿವಮೊಗ್ಗದಲ್ಲಿ ಸಾಕಷ್ಟು ಕತೂಹಲ ಮೂಡಿಸ್ತಿದೆ. ವಿಜಯೇಂದ್ರರ ಬದಲಾವಣೆ ಬಗ್ಗೆ ಮಾತ್ರ ಮಾತನಾಡುವ ಕುಮಾರ್‌ ಬಂಗಾರಪ್ಪ, ಯತ್ನಾಳರ ರೀತಿಯಲ್ಲಿ ಬಿಎಸ್‌ವೈ ಅಥವಾ ಬಿವೈಆರ್‌ ಬಗ್ಗೆ ಪ್ರಸ್ತಾಪಿಸ್ತಲ್ಲ ಎಂಬುದೆ ವಿಶೇಷ. 

SUMMARY | ಕುಮಾರ್‌ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್‌ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್‌ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.

KEY WORDS |‌  ಕುಮಾರ್‌ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್‌ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್‌ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.

malenadutoday add
Share This Article
Facebook Whatsapp Whatsapp Telegram Threads Copy Link
Previous Article ಲಾರಿಯಲ್ಲಿ ಅಡಿಕೆ ಸಾಗಿಸಲು ನಿರ್ಬಂಧ ‌‌& GST ಪ್ರಾಬ್ಲಮ್‌ | ಸಚಿವ ಮಧು ಬಂಗಾರಪ್ಪರ ಮಹತ್ವದ ಹೇಳಿಕೆ !
Next Article ಶಿರಸಿಯಲ್ಲಿ KSRTC ಬಸ್‌ನಲ್ಲಿಯೇ ಸಾಗರದ ನಿವಾಸಿಯ ಹತ್ಯೆ!? ಪತ್ನಿ, ಪ್ರಿಯಕರ ಅರೆಸ್ಟ್‌!
Leave a Comment

Leave a Reply Cancel reply

Your email address will not be published. Required fields are marked *

You Might Also Like

political news ಸಿಎಂ ಡಿಸಿಎಂ ಗೆ ಕೃತಜ್ಞತೆ
POLITICS

mla sn channabasappa : ರಾಬರ್ಟ್ ವಾದ್ರಾ ವಿರುದ್ಧ ಶಿವಮೊಗ್ಗ ನಗರ ಶಾಸಕ ಎಸ್​​ಎನ್ ಚನ್ನಬಸಪ್ಪ ಆಕ್ರೋಶ!

By Prathapa thirthahalli
POLITICS

BIG NEWS | ಶಿವಮೊಗ್ಗದ ರೈತರಿಗೆ ₹25.58 ಕೋಟಿ ರಿಲೀಸ್‌! ಮೋದಿಗೆ ಥ್ಯಾಂಕ್ಸ್‌ ಹೇಳಿದ ಸಂಸದ

By 13
POLITICS

ಗ್ಯಾರಂಟಿ ಯೋಜನೆಯಲ್ಲಿ ಬರುತ್ತದೆಯೇ ಬದಲಾವಣೆ!? ಗೃಹಸಚಿವರು ಮಾತಿನ ಸುಳಿವು ನಿಜವಾಗುತ್ತಾ?

By 13
POLITICS

ಸ್ಪೆಷಲ್‌ FLIGHT ನಲ್ಲಿ ಶಿವಮೊಗ್ಗಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ | GKB ಬರ್ತ್‌ಡೆಗೆ ಮಿನಿಸ್ಟರ್‌ ಸಾಥ್‌ | 3 ದಿನ ಏನೇನು ಕಾರ್ಯಕ್ರಮ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up