SHIVAMOGGA | MALENADUTODAY NEWS | Aug 24, 2024 ಮಲೆನಾಡು ಟುಡೆ
ಶಿವಮೊಗ್ಗ ಕೋರ್ಟ್ ಮತ್ತೊಂದು ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಇಬ್ಬರು ಮಹಿಳೆಯರಿಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ.
ಶಿವಮೊಗ್ಗ ಕೋರ್ಟ್
ಸಂತೋಷ @ ಜೈಲರ್, 34 ವರ್ಷ ಶಿವಮೊಗ್ಗದ ಹನುಮಂತನಗರ ನಿವಾಸಿ. ಈತನಿಗೂ ಈತನ ಪತ್ನಿ ನಾಗವೇಣಿಗೂ ಕಿರಿಕ್ ಇತ್ತು. ಪರಸ್ಪರ ಜಗಳ ಮಾಡಿಕೊಳ್ತಿದ್ದ ಇವರಿಬ್ಬರ ಕಲಹ ಕೊಲೆಗೆ ಕಾರಣವಾಗಿತ್ತು.
ದಿನಾಂಕ : 12-02-2018 ರಂದು ಗಂಡ ಜಗಳವಾಡುತ್ತಿದ್ದಾಗ, ಪತ್ನಿ ನಾಗವೇಣಿ ಮತ್ತು ಜಹೀರಾಬೀ ಎಂಬ ಇನ್ನೊಬ್ಬಾಕೆ, ಸಂತೋಷ್ಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದರು. ಆ ಬಳಿಕ ಚಂದ್ರು, ರಾಕಿ, ಇಮ್ರಾನ್ ಮತ್ತು ಜಬೀಯವರ ಸಹಾಯದೊಂದಿಗೆ ಮೃತದೇಹವನ್ನ ಓಮಿನಿ ವಾಹನದಲ್ಲಿ ಸಾಗಿಸಿ ಸವಳಂಗ ರಸ್ತೆಯ ಕಡೆಗೆ ಎಸೆದಿದ್ದರು.

ಈ ಬಗ್ಗೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0090/2018 ಕಲಂ 302, 201 ಸಹಿತ 149 ಐಪಿಸಿ ರೀತ್ಯಾ ಕೊಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆಗಿನ ತನಿಖಾಧಿಕಾರಿಗಳಾದ ಜಿ. ದೇವರಾಜ್, ಸಿ.ಪಿ.ಐ, ಕೋಟೆ ವೃತ್ತ ಶಿವಮೊಗ್ಗ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇದೀಗ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದಿದ್ದು ಕೋರ್ಟ್ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ವಾದ ಮಂಡಿಸಿದ್ದರು.
ತೀರ್ಪು ಏನಿದೆ?
ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 23-08-2024 ರಂದು ಆರೋಪಿತರಾದ 1) ನಾಗವೇಣಿ, 27 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು 2) ಜಹೀರಾಬಿ, 41 ವರ್ಷ, ಹನುಮಂತನಗರ, ಶಿವಮೊಗ್ಗ ರವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 25,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 04 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ.
ಇನ್ನೂ ಆರೋಪಿ 3) ಜಬೀವುಲ್ಲಾ, 23 ವರ್ಷ, ಹನುಮಂತನಗರ, ಶಿವಮೊಗ್ಗ, 4) ಮೊಹಮ್ಮದ್ ಇಮ್ರಾನ್, 25 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು 5) ಚಂದ್ರಕುಮಾರ್, 24 ವರ್ಷ, ಹನುಮಂತನಗರ, ಶಿವಮೊಗ್ಗ, ಇವರುಗಳಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
BREAKING NEWS | ಜೈಲಿಂದಲೇ ಭದ್ರಾವತಿ MLA ಮಗನ ಹತ್ಯೆಗೆ ಸ್ಕೆಚ್? | ಗಾಂಧಿ ಸರ್ಕಲ್ನಲ್ಲಿ ಸಂಚು, ಡಿಚ್ಚಿ & ಟಿಪ್ಪು ಡೀಲ್| FIR ನಲ್ಲಿ ಏನಿದೆದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನೋಟು ಎಕ್ಸ್ಚೇಂಜ್ಗೆ ಡಬ್ಬಲ್ ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ