ಶಿವಮೊಗ್ಗ : ನಗರದ ಕಂಟ್ರಿ ಕ್ಲಬ್ ಬಳಿಯಲ್ಲಿ ನಿನ್ನೆ ಅಗ್ನಿ ಅನಾಹುತ ಸಂಭವಿಸಿದೆ. ಹೊಸವರ್ಷದ ಆಚರಣೆ ನಡೆಯುತ್ತಿದ್ದ ವೇಳೆ ಇಲ್ಲಿರುವ ಎರಡು ಮರಗಳಿಗೆ ಯಾರೋ ಬೆಂಕಿ ಕೊಟ್ಟಿದ್ದಾರೆ. ಪರಿಣಾಮ ಮರಗಳು ಹೊತ್ತಿ ಉರಿದಿದ್ದು, ಕೆಲಕಾಲ ಆತಂಕ ಉಂಟಾಗಿತ್ತು.
ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್ಗೆ ಸೆಲೆಬ್ರಿಟಿಯಾಗಿ ಬಂದ ಮಗಳು ಆಶಾಭಟ್ ಹೇಳಿದ್ದೇನು/ ವಿಡಿಯೋ ನೋಡಿ
ಕಂಟ್ರಿಕ್ಲಬ್ ಪಾರ್ಕಿಂಗ್ ಬಳಿಯಲ್ಲಿದ್ದ ಈಚಲು ಮರಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ವಿಷಯ ತಿಳಿದು ಸ್ತಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ಧಾರೆ. ಘಟನೆಯಲ್ಲಿ ಮರಗಳಿಗೆ ಬೆಂಕಿ ಕೊಟ್ಟರು ಯಾರು ಎಂಬುದು ತಿಳಿದುಬಂದಿಲ್ಲ