HOSANAGARA

ಶಿವಮೊಗ್ಗದಲ್ಲೊಂದು ಮಿಂಚಿನ ಓಟ ಸಿನಿಮಾ ಸೀನ್! ಊಟದ ಹೆಸರಲ್ಲಿ ಏನು ಮಾಡಿದ ಗೊತ್ತಾ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಂಕರನಾಗ್​ ಬ್ರದರ್ಸ್​ ನಟಿಸಿದ್ದ ಮಿಂಚಿನ ಓಟ ಸಿನಿಮಾ ಬಹುತೇಕರು ನೋಡಿರುತ್ತಾರೆ. ಅದೇ ರೀತಿಯ ಸೀನ್​ ಒಂದು ಶಿವಮೊಗ್ಗದಲ್ಲಿ ಮೊನ್ನೆ ಬುಧವಾರ ನಡೆದಿದ್ದು, ನಿನ್ನೆ ಗುರುವಾರ ವರದಿಯಾಗಿದೆ. ಜೈಲ್​ಗೆ ಹೋಗಬೇಕಿದ್ದ ವಿಚಾರಣಾದೀನ ಕೈದಿಯೊಬ್ಬ ಜೀಪ್​ನಿಂದಲೇ ಎಸ್ಕೇಪ್​ ಆಗಿದ್ದಾನೆ.

ಹೌದು, ಹೊಸನಗರದಲ್ಲಿ ಈ ಘಟನೆ ನಡೆದಿದೆ. ಫಾರೆಸ್ಟ್ ಡಿಪಾರ್ಟ್​ಮೆಂಟ್ ಸಿಬ್ಬಂದಿಯನ್ನ ತಳ್ಳಿ ಆರೋಪಿಯೊಬ್ಬ ಎಸ್ಕೇಪ್ ಆಗಿದ್ದಾನೆ. ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾನೆ

ಪ್ರಕರಣದ ವಿವರ

ಕಳ್ಳಬೇಟೆ ಆರೋಪದಡಿ ತಾಲೂಕಿನ ಆಡುಗೋಡಿ ಗ್ರಾಮದ ವೆಂಕಟೇಶ ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದು ಕೋರ್ಟ್​ಗೆ ಪ್ರೊಡ್ಯೂಸ್ ಮಾಡಿದ್ದರು. ಜೆಎಂಎಫ್​ಸಿ ಕೋರ್ಟ್ ಆತನನ್ನ ಜೆಸಿಗೆ ಒಪ್ಪಿಸಿತ್ತು. ಅದರಿಂದ ಆತನನ್ನು ಕೋರ್ಟ್​ಗೆ ಬಿಡಲು ಜೀಪ್​ ತಗೊಂಡು ಮೂವರು ಸಿಬ್ಬಂದಿ ಹೊರಟಿದ್ದರು. ಬಟ್ಟೆ ಮಲ್ಲಪ್ಪ ಬಳಿ ಹಸಿವಾಗ್ತಿದೆ ಊಟ ಕೊಡಿಸಿ ಎಂದ ಆರೋಪಿ ಎಸ್ಕೇಪ್​ಗೆ ಸ್ಕೆಚ್​ ಹಾಕಿದ್ದ. ಆದರೆ ಇದು ಅರಣ್ಯ ಸಿಬ್ಬಂದಿಗೆ ಗೊತ್ತಾಗಲಿಲ್ಲ. ಉಪವಲಯ ಅರಣ್ಯಾಧಿಕಾರಿ ಆರೋಪಿಗೆ ಊಟ ತರಲು ಹೋಟೆಲ್​ಗೆ ಹೋದಾಗ, ಇತ್ತ ಜೀಪಿನಲ್ಲಿದ್ದ ಸಿಬ್ಬಂದಿಯನ್ನು ತಳ್ಳಾಡಿ, ಹಲ್ಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಕೇಸ್​ ಸಹ ದಾಖಲಾಗಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ