ಆನವಟ್ಟಿ, ಹೊಳೆಹೊನ್ನೂರು ಸೇರಿದಂತೆ ಜಿಲ್ಲೆ ಹಲವೆಡೆ ಇವತ್ತು ನಾಳೆ ಕರೆಂಟ್ ಇರಲ್ಲ! ಮಾಹಿತಿ ತಿಳಿಯಿರಿ

Power Cut in Holehonnur and Anavatti

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತು ಮತ್ತು ನಾಳೆ ಶಿವಮೊಗ್ಗ ಜಿಲ್ಲೆಯ (Power Cut in Holehonnur and Anavatti) ವಿವಿಧ ಕಡೆಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ. ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಇವತ್ತು ಹೊಳೆಹೊನ್ನೂ ರು ಸುತ್ತಮುತ್ತ ಇವತ್ತು ಕರೆಂಟ್ ಇರಲ್ಲ. ಹೊನ್ನಾಳಿ ವಿದ್ಯುತ್ ಸ್ವೀಕರಣ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಈ ಸಂಬಂಧ ಇಂದು ಅಂದರೆ, ಜೂ. 20 ರಂದು ಬೆಳಗ್ಗೆ 10.30 ರಿಂದ ಸಂಜೆ 5.30ರವರೆಗೆ ಆನವೇರಿ, ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಮಂಗೋಟೆ, ಮೈದೋಳಲು, ಗುಡುಮಘಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನವೇರಿ, ಇಟ್ಟಿಗೆಹಳ್ಳಿ, ಇಟ್ಟಿಗೆಹಳ್ಳಿ ಕ್ಯಾಂಪ್, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಶ್ರೀಹರಿಪುರ, ಆದ್ರಿಹಳ್ಳಿ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಅರಿಶಿನಘಟ್ಟ, ಅರಿಶಿನಘಟ್ಟ ತಾಂಡ, ವಡೇರಪುರ, ಮಂಗೋಟೆ, ನಾಗಸಮುದ್ರ, ಗುಡುದಮ್ಮನಹಳ್ಳಿ, ಮೈದೋಳಲು, ಮಲ್ಲಾಪುರ, ಕಲ್ಲಜ್‌ನಾಳ್, ಗುಡುಮಘಟ್ಟೆ, ತಡಸ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ ಕ್ಯಾಂಪ್, ಜಂಗಮರಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ವಿದ್ಯುತ್‌ ವ್ಯತ್ಯಯ : ಆನವಟ್ಟಿ: ಸಮೀಪದ ಕೋಟಿಪುರ ವರೆಗೆ ಅನವಟ್ಟಿ ಸೇರಿದಂತೆ ಕೇಂದ್ರಕ್ಕೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಒಳಪಡುವ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಜೂ.21ರ ಬೆಳಗ್ಗೆ 10ರಿಂದ ಸಂಜೆ 6ರ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Whatsapp / https://chat.whatsapp.com/JrsZ8He4nN600n0r3tJItz