IGP Dr B R Ravikanthe Gowda / ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ / ಇಯರ್ಲಿ ವಿಸಿಟ್ ಗಾಗಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಶಿವಮೊಗ್ಗಕ್ಕೆ ಆಗಮಿಸಿದ್ದರು. ನಿನ್ನೆ ದಿನ ವಾರದ ಕವಾಯತಿನ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ವಾರ್ಷಿಕ ಪರಿವೀಕ್ಷಣೆಯ ಪ್ರೋಟೋಕಾಲ್ ಸಲುವಾಗಿ ಹೊಸನಗರ ತಾಲ್ಲೂಕಿನ ಸ್ಟೇಷನ್ಗಳಿಗೆ ವಿಸಿಟ್ ನೀಡಿದರು. ಈ ಪೈಕಿ ಹೊಸನಗರ ಪೊಲೀಸ್ ಸ್ಟೇಷನ್ ಮತ್ತು ನಗರ ಪೊಲೀಸ್ ಸ್ಟೇಷನ್ಗೆ ಭೇಟಿ ಕೊಟ್ಟ ಅವರು ಅಲ್ಲಿನ ಕೇಸ್ ಶೀಟ್ಗಳನ್ನು ಪರಿಶೀಲಿಸಿದರು. ಸಿಬ್ಬಂದಿಗಳನ್ನ ವಿಚಾರಿಸಿದರು, ಕುಂದುಕೊರತೆಗಳನ್ನು ಆಲಿಸದರಷ್ಟೆ ಅಲ್ಲದೆ ಸ್ಟೇಷನ್ನ ವ್ಯವಸ್ಥೆ ಹಾಗೂ ನಾಗರಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
Whatsapp / https://chat.whatsapp.com/JrsZ8He4nN600n0r3tJItz
ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಠಾಣೆಗೆ (IGP Dr B R Ravikanthe Gowda) ಆಗಮಿಸುತ್ತಲೇ ಎರಡು ಪೊಲೀಸ್ ಸ್ಟೇಷನ್ನಲ್ಲಿಯು ಅವರಿಗೆ ಗೌರವ ವಂದನೆ ಸಲ್ಲಿಸಲಾಗಿದೆ. ಈ ವೇಳೆ ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಕೂಡ ಉಪಸ್ಥಿತರಿದ್ದು, ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡರಿಗೆ ತಮ್ಮ ವ್ಯಾಪ್ತಿಯ ಠಾಣೆಯ ಬಗೆಗಿನ ಮಾಹಿತಿಯನ್ನು ಒದಗಿಸಿದರು. ಈ ಕುರಿತಾದ ಫೋಟೋ ಇಲ್ಲಿದೆ.

ಗೌರವ ವಂದನೆ ಸ್ವೀಕರಿಸಿದ ಬಳಿಕ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ರು ಠಾಣೆಯ ದೈನಂದಿನ ಕಾರ್ಯವೈಖರಿ, ದಾಖಲಾತಿ ಹಾಗೂ ಕಡತಗಳ ನಿರ್ವಹಣೆ ಸೇರಿದಂತೆ ಇತರೆ ಪ್ರಮುಖ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿಮಾರ್ಗದರ್ಶನ ನೀಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಸಂಬಂಧ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡರವರು ಅಂತಿಮವಾಗಿ ಠಾಣಾಧಿಕಾರಿಗಳು ಸಿಬ್ಬಂದಿಗಳ ಜೊತೆಗೆ ಫೋಟೋ ಸೇಷನ್ನಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಠಾಣೆಯ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



