Thirthahalli ತೀರ್ಥಹಳ್ಳಿ: ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಳವಡಿಸಲಾಗಿದ್ದ ಎರಡು ಮೋಟಾರ್ ಪಂಪ್ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದಲ್ಲಿ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು
ಘಟನೆ ವಿವರ
ಘಟನೆ ವಿವರ ನೋಡುವುದಾದರೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದ ತಿಮ್ಮಣ್ಣ ನಾಯ್ಕನ ಕೆರೆಯ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಸಾರ್ವಜನಿಕರ ಬಳಕೆಗಾಗಿ 7.5 ಹೆಚ್.ಪಿ ಮತ್ತು 5 ಹೆಚ್.ಪಿ ಸಾಮರ್ಥ್ಯದ ಎರಡು ಮೋಟಾರ್ ಪಂಪ್ಗಳನ್ನು ಅಳವಡಿಸಲಾಗಿತ್ತು. ಮೇ 15 ರನ ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟೆ ಮೋಟಾರ್ಗಳ ಸ್ವಿಚ್ ಆಫ್ ಮಾಡಿದ್ದರು. ಆ ಸಮಯದಲ್ಲಿ ಮೋಟಾರ್ ಪಂಪ್ಗಳು ಬಾವಿಯಲ್ಲೇ ಇದ್ದವು ಆದರೆ, ಮರುದಿನ ಮುಂಜಾನೆ 06-00 ಗಂಟೆಗೆ ನೀರುಗಂಟೆ ಮೋಟಾರ್ಗಳನ್ನು ಚಾಲೂ ಮಾಡಲು (ಸ್ವಿಚ್ ಆನ್) ಹೋದಾಗ, ಬಾವಿಗೆ ಅಳವಡಿಸಲಾಗಿದ್ದ ಆ ಎರಡೂ ಮೋಟಾರ್ ಪಂಪ್ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ಯಾರೋ ಅಪರಿಚಿತ ಕಳ್ಳರು ರಾತ್ರೋರಾತ್ರಿ ಬಾವಿಗೆ ಇಳಿದು ಮೋಟಾರ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಖಾತ್ರಿಯಾದ ತಕ್ಷಣ, ನೀರುಗಂಟೆಯು ಈ ವಿಷಯವನ್ನು ಪಿ,ಡಿ,ಒ ಅವರಿಗೆ ತಿಳಿಸಿದ್ದಾರೆ. ಕಳ್ಳತನವಾಗಿರುವ ಎರಡು ಮೋಟಾರ್ಗಳ ಒಟ್ಟು ಅಂದಾಜು ಮಾರುಕಟ್ಟೆ ಬೆಲೆ ಸುಮಾರು 70,000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಮೋಟರ್ನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು pdo ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
