ವಯರ್ ಕಳವು, ಯುವಕ ಸಾವು, ಮಾವನ ಕೊಲೆ*ಗೆ ಯತ್ನ, ಕಾರಲ್ಲಿ ಕನ್ನ! ಇನ್ನಷ್ಟು ಸುದ್ದಿ ಇವತ್ತಿನ ಕಂಪ್ಲೀಟ್ ಸ್ಟೋರಿ

ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ತಾಲೂಕಿನ ಕೊನಗವಳ್ಳಿ ಗ್ರಾಮದ 28 ವರ್ಷದ ಪ್ರಶಾಂತ್ ಎಂಬ ಯುವಕ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗೇಜ್ಜೆನಹಳ್ಳಿ ಗ್ರಾಮದ ಹೆಚ್.ಪಿ ಪೆಟ್ರೋಲ್ ಬಂಕ್ ಸಮೀಪ ಅಪರಿಚಿತ ವಾಹನವೊಂದು ಈತನ ಬೈಕ್‌ಗೆ ಅಪ್ಪಳಿಸಿದೆ. ಪರಿಣಾಮ ಗಾಯಗೊಂಡಿದ್ದ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ನ್ಯೂರೋ ಭಾರತ್ ಮತ್ತು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

How did a series of tragic events unfold across various locations in Shivamogga district recently?
How did a series of tragic events unfold across various locations in Shivamogga district recently?

ಶಿವಮೊಗ್ಗ ಕೇಂದ್ರ ಕಾರಾಗೃಹದ ಇಬ್ಬರು ಜೀವಾವಧಿ ಕೈದಿ ಸೇರಿ ರಾಜ್ಯದೆಲ್ಲೆಡೆ 30 ಕೈದಿಗಳ ರಿಲೀಸ್!

ಇನ್ನೊಂದೆಡೆ ಶಿವಮೊಗ್ಗ ನಗರದ ಶಕ್ತಿಧಾಮ ಲೇಔಟ್ ಪ್ರದೇಶದಲ್ಲಿ ಪ್ರಾಧ್ಯಾಪಕರಾಗಿರುವ ರಾಕೇಶ್ ಎಂಬುವವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿ ಬೃಹತ್ ಪ್ರಮಾಣದ ವಿದ್ಯುತ್ ವಯರ್‌ಗಳು ಕಳುವಾಗಿವೆ. ಮನೆಯ ನಿರ್ಮಾಣ ಕಾಮಗಾರಿಯ ಭಾಗವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವು ಮುಕ್ತಾಯಗೊಂಡಿತ್ತು. ಕೆಲಸಗಾರರು ತಮ್ಮ ಕೆಲಸ ಮುಗಿಸಿ ಹೋದ ಬಳಿಕ ರಾಕೇಶ್ ಅವರು ಮನೆಗೆ ಭದ್ರವಾಗಿ ಬೀಗ ಹಾಕಿ ತೆರಳಿದ್ದರು. ಮರುದಿನ ಮುಂಜಾನೆ 6 ಗಂಟೆಯ ಸುಮಾರಿಗೆ ಅವರು ಹಿಂದಿರುಗಿ ಬಂದು ಪರಿಶೀಲಿಸಿದಾಗ ಕಟಿಂಗ್ ಮೆಷಿನ್‌ನ ವಯರ್ ತುಂಡಾಗಿರುವುದು ಅವರ ಗಮನಕ್ಕೆ ಬಂದಿದೆ. ಅಂದಾಜು 2.50 ಲಕ್ಷ ರೂಪಾಯಿ ಮೌಲ್ಯದ ವೀಗಾರ್ಡ್ ಕಂಪನಿಯ ವಿದ್ಯುತ್ ವಯರ್‌ಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಈ ಕಳ್ಳತನ ಪ್ರಕರಣದ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

How did a series of tragic events unfold across various locations in Shivamogga district recently?
How did a series of tragic events unfold across various locations in Shivamogga district recently?

ಶಿವಮೊಗ್ಗ ,ಸಾಗರದಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಗಮನಿಸಿ ಅಡಿಕೆ ರೇಟು!

ಇತ್ತ ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದೊಳಗೆ ಸಂಭವಿಸಿದ ಅಪಘಾತವೊಂದರಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಲು ಸಿದ್ಧವಾಗಿದ್ದ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ ಒಂದು ಈ ಯುವಕನಿಗೆ ಅಪ್ಪಳಿಸಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಗಂಭೀರ ಸ್ವರೂಪದ ಗಾಯಗಳಿಗೆ ತುತ್ತಾದ ಆತನನ್ನು ಕೂಡಲೇ ನಗರದ ಮೆಗ್ಗಾನ್ ಆಸ್ಪತ್ರೆಗೆ ಒಯ್ದು ದಾಖಲಿಸಲಾಗಿದೆ.ಈ ಕುರಿತಂತೆ ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನೂ ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಸರ್ಕಲ್ ಸಮೀಪವಿರುವ ಮೇಲ್ಸೇತುವೆಯ ಕೆಳಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿನಿಂದ ಬರೋಬ್ಬರಿ 2,00,000 ರೂಪಾಯಿ ನಗದು ಹಣ ಕಳುವಾಗಿರುವ ಬಗ್ಗೆ ವರದಿಯಾಗಿದೆ. 34 ವರ್ಷದ ಇಂಜಿನಿಯರ್ ಹಾಲೇಶ್ ಎಂಬುವವರು  ಹಣ ಕಳೆದುಕೊಂಡಿದ್ದಾರೆ. ಹಾಲೇಶ್ ಅವರು ತಮ್ಮ ಫೋರ್ಡ್ ಕಾರಿನಲ್ಲಿ ಆಗಮಿಸಿ, ಅಲ್ಲಿಯೇ ಇರುವ ನಿಸರ್ಗ ಹೋಟೆಲ್‌ಗೆ ಉಪಾಹಾರ ಸೇವಿಸಲು ತೆರಳಿದ್ದರು. ಕೆಲಸದ ತರಾತುರಿಯಲ್ಲಿದ್ದ ಅವರು ತಮ್ಮ ಕಾರಿನ ಬಾಗಿಲನ್ನು ಲಾಕ್ ಮಾಡುವುದನ್ನು ಮರೆತು ಹೋಗಿದ್ದೇ ಈ ದುರ್ಘಟನೆಗೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ  ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

How did a series of tragic events unfold across various locations in Shivamogga district recently?
How did a series of tragic events unfold across various locations in Shivamogga district recently?

ಅತ್ತ  ಶಿಕಾರಿಪುರ ತಾಲೂಕಿಗೆ ಸೇರಿದ ಬಿಳಿಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಮಾವನ ಮೇಲೆಯೇ ಪ್ರಾಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆಯೊಂದು ಜರುಗಿದೆ. 72 ವರ್ಷದ ವಯೋವೃದ್ಧ ಚನ್ನಾನಾಯ್ಕ ಎಂಬುವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ಅಳಿಯ ಮಾಲತೇಶ್ ಎಂಬಾತ ಮದ್ಯದ ನಶೆಯಲ್ಲಿ ಸಣ್ಣ ವಿಚಾರವೊಂದಕ್ಕೆ ಜಗಳ ತೆಗೆದು, ಹತ್ಯೆ ಮಾಡಲು ಯತ್ನಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಳಿಯ ಮಾಲತೇಶ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

How did a series of tragic events unfold across various locations in Shivamogga district recently?
How did a series of tragic events unfold across various locations in Shivamogga district recently?

ಶಿವಮೊಗ್ಗ: ನಗರದಲ್ಲಿ 2 ದಿನ ವಿದ್ಯುತ್ ವ್ಯತ್ಯಯ

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

How did a series of tragic events including road accidents, massive thefts, and a brutal murder attempt unfold across various locations in Shivamogga district recently?
shivamogga car decor sun control house
shivamogga car decor sun control house