ಅರಸಾಳು ಬಸ್ ದುರಂತ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಡಿಸಿ ಏನಂದ್ರು

ಹಂಚಿಕೊಳ್ಳಿ
WhatsApp Facebook X Telegram
 Prohibitory Orders Shimoga DC Statement  Shivamogga DC Name Misused Cyber Fraud Alert
 Prohibitory Orders Shimoga DC Statement  Shivamogga DC Name Misused Cyber Fraud Alert

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಸಮೀಪ ಸಂಭವಿಸಿದ ಖಾಸಗಿ ಬಸ್ ಅಗ್ನಿ ಅವಘಡ ಹಾಗೂ ಶಾಲಾ ಮಕ್ಕಳ ಆರೋಗ್ಯದ ಕುರಿತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಇಂದು ಮಾಹಿತಿ ಹಂಚಿಕೊಂಡಿದ್ದಾರೆ. 

ಶಿವಮೊಗ್ಗ, ಸಾಗರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು! ವಾರದಲ್ಲಿಯೇ ಬದಲಾಯ್ತು ಅಡಿಕೆ ದರ!

ಬಸ್​ ದುರಂತದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಅರಸಾಳು ಬಳಿ ಆಕಸ್ಮಿಕವಾಗಿ ಬೆಂಕಿಗೊಳಗಾಗಿತ್ತು. ಈ ಘಟನೆಯಲ್ಲಿ ಹತ್ತು ಪ್ರಯಾಣಿಕರು ಗಾಯಗೊಂಡಿದ್ದು, ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರ ಪ್ರಾಣಕ್ಕೂ ಅಪಾಯವಿಲ್ಲ, ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ. ಬೆಂಕಿ ಅವಘಡದ ನಿಖರ ಕಾರಣಕ್ಕಾಗಿ ಪೊಲೀಸ್ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಬಸ್ ಮಾಲೀಕರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು. 

ಇದೇ ವೇಳೇ ವಿಪರೀತ ಕೆಮ್ಮು ಮತ್ತು ಶೀತದಿಂದ ಆಸ್ಪತ್ರೆಗೆ ದಾಖಲಾಗಿದ್ದ 17 ವಸತಿ ಶಾಲಾ ಮಕ್ಕಳ ಕುರಿತು ಮಾತನಾಡಿದ ಡಿಸಿ, ಮಕ್ಕಳ ರಕ್ತದ ಮಾದರಿ ಪರೀಕ್ಷೆಯಲ್ಲಿ ‘ಇನ್ಫ್ಲುಯೆಂಜಾ ಬಿ’ (Influenza B) ಇರುವುದು ದೃಢಪಟ್ಟಿದೆ. ಇದು ಕೇವಲ ಶೀತದ ಲಕ್ಷಣವಾಗಿದ್ದು, ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ನಾಳೆ ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗುವುದು” ಎಂದರು. 

ಭದ್ರಾವತಿಯಲ್ಲಿ ವಿಟಮಿನ್ ಮತ್ತು ಐರನ್ ಮಾತ್ರೆ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುನ್ನೆಚ್ಚರಿಕಾ ಕ್ರಮವಾಗಿ ಆ ನಿರ್ದಿಷ್ಟ ಬ್ಯಾಚ್‌ನ ಎಲ್ಲಾ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಮಾತ್ರೆಗಳ ಗುಣಮಟ್ಟದಲ್ಲಿ ದೋಷವಿಲ್ಲ, ಆದರೆ ಕೆಲವರಿಗೆ ಮಾತ್ರೆ ಸೇವಿಸಿದಾಗ ಸಹಜವಾಗಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಸದ್ಯಕ್ಕೆ ಆ ಬ್ಯಾಚ್‌ನ ಮಾತ್ರೆಗಳ ವಿತರಣೆಯನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

Shimoga DC Statement on Arasalu Bus Fire & Student Health

Shimoga DC Statement  Shivamogga DC Name Misused Cyber Fraud Alert
Shimoga DC Statement  
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor