ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ ಜೈಲು|

ಶಿವಮೊಗ್ಗದಲ್ಲಿ ನಡೆದ ಪ್ರಮುಖ ಘಟನೆಗಳ ಸಂಕ್ಷಿಪ್ತ ಸುದ್ದಿ ಈ ರೀತಿ ಇದೆ..

ನಾಪತ್ತೆಯಾಗಿದ್ದ ಶಿಕಾರಿಪುರದ ಶಾಲಾ ಬಾಲಕರು ಶಿವಮೊಗ್ಗದಲ್ಲಿ ಪತ್ತೆ

ಶಿಕಾರಿಪುರದಲ್ಲಿ ಹೋರಿಹಬ್ಬವನ್ನು ನೋಡಲು ಶಾಲೆಗೆ ಹೋಗದೆ ತೆರಳಿದ್ದ ಮೂವರು ಬಾಲಕರು (ಲಿಖಿತ್, ಪ್ರಥಮ್ ಮತ್ತು ಸಂದೀಪ್), ಟೈಂ ಆಗಿದ್ದರಿಂದದ ಮನೆಗೆ ಹೋಗದೆ ನಾಪತ್ತೆಯಾಗಿದ್ದರು.  ಪೋಷಕರಿಗೆ ಹೆದರಿ ಮಕ್ಕಳು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಈ ನಡುವೆ ಫೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಹೊತ್ತಿಗೆ ಮಕ್ಕಳು ಶಿವಮೊಗ್ಗಕ್ಕೆ ಬಂದು ಮನೆಯವರಿಗೆ ಕರೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು  ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕರನ್ನು ಪತ್ತೆ ಹಚ್ಚಿ ಬಳಿಕ ಪೋಷಕರ ಸುಪರ್ಧಿಗೆ ಒಪ್ಪಿಸಿದ್ದಾರೆ.

Shivamogga news roundup, Shikaripura missing boys found, Bear attack in Haregoppa, Gold thief sentenced Shivamogga court, Doddapete Police, Hori Habba incident, JMFC Court verdict, Shivamogga crime news today, Malenadu Today news.
Shikaripura missing boys found, Bear attack in Haregoppa, Gold thief sentenced

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

ಶಿಕಾರಿಪುರದಲ್ಲಿ ಕರಡಿ ದಾಳಿ: ರೈತ ಆಸ್ಪತ್ರೆಗೆ ದಾಖಲು

ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಜಮೀನಿನಲ್ಲಿ ಅಳವಡಿಸಿದ್ದ ಮೋಟರ್ ಆನ್​ ಮಾಡಲು ತೆರಳಿದ್ದ ಸೋಮ್ಲಾ ನಾಯಕ್ (58) ಎಂಬುವವರ ಮೇಲೆ ಕರಡಿಯೊಂದು ದಾಳಿ ನಡೆಸಿದೆ. ಪರಿಣಾಮ ರೈತರ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು  ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ಅರಣ್ಯ ಅಧಿಕಾರಿಗಳು ಕರಡಿಯನ್ನು ಸೆರೆಹಿಡಿಯುವ ವಿಶ್ವಾಸ ನೀಡಿದ್ದಾರೆ 

Shivamogga news roundup, Shikaripura missing boys found, Bear attack in Haregoppa, Gold thief sentenced Shivamogga court, Doddapete Police, Hori Habba incident, JMFC Court verdict, Shivamogga crime news today, Malenadu Today news.
Shikaripura missing boys found, Bear attack in Haregoppa, Gold thief sentenced Shivamogga court,

ಚಿನ್ನ ಕದ್ದವನಿಗೆ 3 ವರ್ಷ ಜೈಲು ಶಿಕ್ಷೆ

2015ರಲ್ಲಿ ಶಿವಮೊಗ್ಗದ ಗಾಂಧಿ ಬಜಾರ್‌ನ ಜ್ಯುವೆಲರಿ ಅಂಗಡಿಯಲ್ಲಿ ಬೆಳ್ಳಿ  ಖರೀದಿಸುವ ನೆಪದಲ್ಲಿ 96 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ದಾವಣಗೆರೆ ಮೂಲದ ಅಬ್ಬಾಸ್ ಖಾನ್‌ಗೆ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 11 ವರ್ಷಗಳ ಸುದೀರ್ಘ ವಿಚಾರಣೆಯ ನಂತರ, ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shivamogga news roundup, Shikaripura missing boys found, Bear attack in Haregoppa, Gold thief sentenced Shivamogga court, Doddapete Police, Hori Habba incident, JMFC Court verdict, Shivamogga crime news today, Malenadu Today news.