KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’
ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯವರಾದ ಜಗದೀಶ್ ನಾಯ್ಕ್ ಎಂಬವರು ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆ ಔರಾದ್ ನ ಗಾಂಧಿಗಂಜ್ ಪೊಲೀಸ್ ಸ್ಟೇಷನ್ ಆಗಿ ಅವರು ಕೆಲಸ ಮಾಡುತ್ತಿದ್ದರು. ಶಿವಮೊಗ್ಗದ ನಳೀನ್ ಕೊಪ್ಪ ಗ್ರಾಮದ ಜಗದೀಶ್ ನಾಯ್ಕ್ 2009 ರಲ್ಲಿ ಪೇದೆಯಾಗಿ ಡಿಪಾರ್ಟ್ಮೆಂಟ್ ಸೇರಿದ್ದರು. ಆನಂತರ 2015 ರಲ್ಲಿ RSI ಆಗಿ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಳಿಕ 2018 ಪಿಎಸ್ಐ ಸಿವಿಲ್ ಆಗಿ ಬೀದರ್ ಜಿಲ್ಲೆಯ ಔರಾದ್ ಗೆ ತೆರಳಿದ್ದರು.
ಕ್ಯಾನ್ಸರ್ಗೆ ತುತ್ತಾಗಿದ್ದ ಇವರು ಅದರಿಂದ ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ತಂದೆ ತಾಯಿ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಜಗದೀಶ್ ನಾಯ್ಕ್ ಅಗಲಿದ್ದಾರೆ. ಶಿಕಾರಿಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹೊಸೂರಿನಲ್ಲಿ ಪ್ರೌಢಶಾಲೆ ಸೇರಿದ್ದರು. ಆನಂತರ ಪದವಿಯನ್ನ ದೂರ ಶಿಕ್ಷಣ ಮೂಲಕ ಪಡೆದಿದ್ದರು. ಹೊಸಕೊಪ್ಪದ ಯುವತಿಯನ್ನ ಮದುವೆಯಾಗಿದ್ದರು.
ಮೃತ ಜಗದೀಶ್ ನಾಯ್ಕ ಅವರ ಅಂತ್ಯಕ್ರಿಯೆ ಸ್ವ ಗ್ರಾಮ ನಳೀನ್ಕೊಪ್ಪದಲ್ಲಿ ನಡೆಯಲಿದ್ದು, ಅಂತ್ಯಕ್ರಿಯೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?
