BREAKING NEWS / ಶಿವಮೊಗ್ಗದಲ್ಲಿ ಮತ್ತೆ ಖಾಕಿ ಪಿಸ್ತೂಲಿನ ಸದ್ದು! 18 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಸೈಫು ಕಾಲಿಗೆ ಪೊಲೀಸ್ ಗುಂಡು! ರೌಡಿಗಳಿಗೆ ವಾರ್ನಿಂಗ್​!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್​ನ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಸೈಫು ಎಂಬಾತನನ್ನು ಹಿಡಿಯಲು ಹೋಗಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್ ಎಂಬವರು ಗಾಯಗೊಂಡಿದ್ದಾರೆ. 

ಸಿಬ್ಬಂದಿಯ ರಕ್ಷಣೆಗಾಗಿ  ಜಯನಗರ ಠಾಣೆ ಪಿಎಸ್​ಐ  ನವೀನ್ ರಕ್ಷಣಾತ್ಮಕ ಕ್ರಮವಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಸೆರೆಸಿಕ್ಕಿದ್ದಾನೆ. ಈತ ಜೈಲಿನಲ್ಲಿರುವ ಮಾರ್ಕೆಟ್ ಫೌಜನ್​ ಗ್ಯಾಂಗ್​ನ ಸದಸ್ಯನಾಗಿದ್ದು ಈತನ ವಿರುದ್ಧ 18 ಕೇಸ್​ಗಳಿವೆ. ಕೊಲೆಯತ್ನ ಪ್ರಕರಣದಲ್ಲಿ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಈತನನ್ನು ಹಿಡಿಯಲು ಜಯನಗರ ಠಾಣೆ ಪೊಲೀಸರು ತೆರಳಿದ್ದರು. 

 


ಶಿವಮೊಗ್ಗಕ್ಕೆ ಅಚ್ಚರಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ! ಶಾರದಾ ಪೂರ್ಯನಾಯ್ಕ್​ರಿಗೆ ಜೆಡಿಎಸ್​ ನಲ್ಲಿ ಸಿಕ್ತು ಮಹತ್ವದ ಸ್ಥಾನ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯಕ್ ಗೆ ಪಕ್ಷದಲ್ಲಿ ಅಚ್ಚರಿಯ ಸ್ಥಾನಮಾನವೊಂದು ಲಭ್ಯವಾಗಿದೆ. ಅವರನ್ನ ಜೆಡಿಎಸ್​ ಶಾಸಕಾಂಗ ಪಕ್ಷದ  ಉಪ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಕಾರ್ಯನಿರ್ವಹಿಸಲಿದ್ದು, ಸದನದಲ್ಲಿ ಉಪ ನಾಯಕಿಯಾಗಿ ಶಾರದಾ ಪೂರ್ಯ ನಾಯ್ಕ್​ ಕೆಲಸ ಮಾಡಲಿದ್ಧಾರೆ. .ಹಿರಿಯ ನಾಯಕರ ಸಲಹೆಗಳನ್ನು ಪರಿಗಣಿಸಿ, ಜೆಡಿಎಸ್ ಮೊದಲ ಬಾರಿಗೆ ಮಹಿಳೆಯೊಬ್ಬರು  ಉಪನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಿದೆ.  ಎರಡು ಬಾರಿ ಶಾಸಕಿಯಾಗಿರುವ ಶಾರದಾ ಪೂರ್ಯನಾಯ್ಕ್​ ರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡುವ ಹಿಂದೆ ಪೊಲಿಟಿಕಲ್ ಗೇಮ್​ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ. ಇನ್ನೂ  ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಇವತ್ತು  ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾರದಾ ಪೂರ್ಯ ನಾಯ್ಕರನ್ನ ಆಯ್ಕೆ ಮಾಡಲಾಗಿದೆ. ಇದೆಲ್ಲದರ ನಡುವೆ ವಿಪಕ್ಷ ನಾಯಕನ ಆಯ್ಕೆಯು ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರನ್ನ ಈ ಸ್ಥಾನಕ್ಕೆ ನೇಮಕ ಮಾಡಲಾಗುತ್ತೆ ಎಂಬ ಚರ್ಚೆಗಳು ಕೇಳಿಬರುತ್ತಿದೆ.  


 

 

Leave a Comment