ಬಿಗ್​ ನ್ಯೂಸ್ : ಭದ್ರಾವತಿ MLA ಬಿ.ಕೆ.ಸಂಗಮೇಶ್​ಗೆ ಮಿನಿಸ್ಟರ್​ ಗಿರಿ!? ಏನಿದು ಸುದ್ದಿ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 1 2025: ಸಿದ್ದರಾಮಯ್ಯರ ಸರ್ಕಾರದಲ್ಲಿ ಮತ್ತೆ ಸಂಪುಟ ಪುನರಚನೆಯ ಮಾತುಗಳು ಕೇಳಿಬರುತ್ತಿದೆ.  ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಸದ್ಯದಲ್ಲೆ ನಡೆಯಲಿದೆ ಎಂಬ ದೆಹಲಿ ವರ್ತಮಾನಗಳು ಕಾಂಗ್ರೆಸ್​ ಪಕ್ಷದಲ್ಲಿಯೇ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಶಿವಮೊಗ್ಗದ ವಿಚಾರದಲ್ಲಿ ಭದ್ರಾವತಿ ಶಾಸಕ ಬಿಕೆ ಸಂಗಮೇಶ್​ಗೆ ಮಂತ್ರಿಗಿರಿ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದೆ. 

BK Sangamesh Likely to Get Ministerial Berth
BK Sangamesh Likely to Get Ministerial Berth

ಸದ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ, ಹಾಲಿ ಸಂಪುಟದಲ್ಲಿರುವ ಹದಿನೈದಕ್ಕೂ ಹೆಚ್ಚು ಮಂತ್ರಿಗಳು ಪಕ್ಷದ ಕೆಲಸಕ್ಕೆ ನಿಯೋಜಿತರಾಗಿ,ಅಷ್ಟೇ ಮಂದಿ ಶಾಸಕರು ಮಂತ್ರಿಗಳಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತರು ಆರ್​ ಟಿ ವಿಠಲಮೂರ್ತಿಯವರು ತಮ್ಮ ಸೋಶಿಯಲ್ ಮೀಡಿಯಾ ಫೇಸ್​ಬುಕ್​ ಅಕೌಂಟ್​ನಲ್ಲಿ ಸುದೀರ್ಘ ಆರ್ಟಿಕಲ್​ವೊಂದನ್ನ ಬರೆದಿದ್ದಾರೆ. ಅವರು ಬರೆದಿರುವ ಪ್ರಕಾರ,  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್  (BK Sangamesh ) ಈ ಬಾರಿ ಮಂತ್ರಿಯಾಗುವುದು ಬಹುತೇಕ ನಿಚ್ವಳ.ನಾಲ್ಕು ಬಾರಿ ಶಾಸಕರಾದರೂ ಒಂದಿಲ್ಲೊಂದು ಕಾರಣದಿಂದ ಸಂಗಮೇಶ್ ಅವಕಾಶ ಕಳೆದುಕೊಳ್ಳುತ್ತಾ ಬಂದಿದ್ದರು.ಆದರೆ ಈ ಸಲ ಅವರಿಗೆ ಹಲವು ಅಂಶಗಳು ಪ್ಲಸ್ ಆಗಿರುವುದರಿಂದ ಮಂತ್ರಿಯಾಗುವ ಅವಕಾಶ ಹೆಚ್ಚು ಎಂದು ವಿವರಿಸಿದ್ದಾರೆ. 

ಆರ್​ಟಿ ವಿಠಲಮೂರ್ತಿಯವರ ಪೂರ್ತಿ ಲೇಖನ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ : facebook

BK Sangamesh Likely to Get Ministerial Berth
BK Sangamesh Likely to Get Ministerial Berth

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ

BK Sangamesh Likely to Get Ministerial Berth

Leave a Comment