Sampekkatte Circle ಹೊಸನಗರ ಸಂಪೆಕಟ್ಟೆ ಸರ್ಕಲ್ನಲ್ಲಿ ರಾತ್ರಿ ಸಮಾ ಹೊಡ್ಕೊಂಡ್ರು : ಸಿಸಿ ಟಿವಿಯ ದೃಶ್ಯ ಸೆರೆ
ಹೊಸನಗರ,ಯುವಕನೊಬ್ಬನ ಮೇಲೆ ಮದ್ಯದ ವಿಚಾರವಾಗಿ ನಡು ರಸ್ತೆಯಲ್ಲಿ ಹಲ್ಲೆ ನಡೆಸಿರುವ ಘಟನೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಸಂಪೆಕಟ್ಟೆ ಸರ್ಕಲ್ನಲ್ಲಿ ನಡೆದಿದೆ. ಈ ಸಂಬಂಧ ಲಕ್ಷ್ಮೀಶ ಎಂಬಾತ ಗಾಯಗೊಂಡಿದ್ದು ಆತನನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

- Advertisement -
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತುಂಬೆಗದ್ದೆಯ ನಿವಾಸಿ ಲಕ್ಷ್ಮೀಶ ಅವರು ಸಂಪೆಕಟ್ಟೆಯ ಅಂಗಡಿಯೊಂದಕ್ಕೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಜೀಪಿನಲ್ಲಿ ಬಂದ ಸುಬ್ರಹ್ಮಣ್ಯ, ಅವಿನಾಶ, ಮತ್ತು ರಾಘವೇಂದ್ರ ಎಂಬ ಮೂವರು, ಲಕ್ಷ್ಮೀಶ ಅವರಿಗೆ ಮದ್ಯ ಕೊಡಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ. ಲಕ್ಷ್ಮೀಶ ನಿರಾಕರಿಸಿದಾಗ, ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


