shivamogga bhadravathi news 3 / ಮೇವಿನೊಳಗೆ ಇತ್ತು ಸ್ಫೋಟಕ! ಹಸು ಸಾವು! / ವಿವಾಹಿತೆ ಆತ್ಮಹತ್ಯೆ / ಇನ್ನಷ್ಟು ಸುದ್ದಿಗಳು

shivamogga bhadravathi news ಭದ್ರಾವತಿ ತಾಲ್ಲೂಕು ಮೂಲಕಟ್ಟೆ ಗ್ರಾಮದಲ್ಲಿ ಮೇಯುತ್ತಿದ್ದ ಹಸುವು, ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿದೆ. ಇನ್ನೆರಡು ಹಸುಗಳು ಗಾಯಗೊಂಡಿವೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಹಂದಿ ಹೊಡೆಯಲು ಬಳಸಿದ್ದ ಸ್ಫೋಟಕ ಸಿಡಿದಿದೆ ಎನ್ನಲಾಗುತ್ತಿದೆ. ಪೇಪರ್​ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳವನ್ನು ಸೀಲ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ವಿಷಯ ತಿಳಿದುಬಂದಲ್ಲಿ. ಇದು ಅಕಸ್ಮಾತ್ ಸ್ಫೋಟವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬುದನ್ನು ನಿರ್ಧರಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  

shivamogga bhadravathi news / ವಿವಾಹಿತೆ ಆತ್ಮಹತ್ಯೆ

ಶಿವಮೊಗ್ಗದ ಹೊಳೆ ಹನಸವಾಡಿಯಲ್ಲಿ ವಿವಾಹಿತ  ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ವಿವರವಾದ ತನಿಖೆ ನಡೆಸುತ್ತಿದ್ದಾರೆ. ಧಾರವಾಡ ಮೂಲದ ಯುವತಿ ,ಇಲ್ಲಿನ ಯುವಕನೊಂದಿಗೆ ಮದುವೆಯಾಗಿ ಕಳೆದ 5 ವರ್ಷಗಳಿಂದ ಸಂಸಾರ ನಡೆಸ್ತಿದ್ದರು. ಯುವತಿಯ ಸಾವಿಗೆ ಕಾರಣ ಸ್ಷಷ್ಟವಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ತರೀಕೆರೆ ತಾಲೂಕು ಮುದ್ದುಗುಂಡಿ ತಾಂಡ್ಯದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಾಲಭಾದೆ ಕಾರಣ ಎನ್ನಲಾಗುತ್ತಿದೆ. ಮುದ್ದುಗುನಡಿ ತಾಂಡ್ಯ ತಿಮ್ಮನಾಯ್ಕ್ (65)  ಮೃತರು.  ಇವರ ಬ್ಯಾಂಕ್​ ಸಾಲ ಸೆಟ್ಲಮೆಂಟ್​ಗೆ ಬಂದಿತ್ತು. ಈ ಸಂಬಂದ ನೋಟಿಸ್ ಬಂಧ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

shivamogga bhadravathi news

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು