2 March 2026 Dina Bhavishya and Panchanga Details /ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿ ಇಂದು ಸಂಜೆ 5.48 ರವರೆಗೆ ಇರಲಿದ್ದು, ತದನಂತರ ಹುಣ್ಣಿಮೆ ಪ್ರಾರಂಭವಾಗಲಿದೆ. ಬೆಳಗ್ಗೆ 7.30 ರಿಂದ 9.00 ರವರೆಗೆ ರಾಹುಕಾಲ ಹಾಗೂ ಬೆಳಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲ ಇರುತ್ತದೆ.

ಇಂದಿನ ರಾಶಿಫಲ
ಮೇಷ /ಗೊಂದಲ ಹೆಚ್ಚಾಗುವ ಸಾಧ್ಯತೆ ಇದೆ. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ವಿಳಂಬ, ಬರಬೇಕಾದ ದುಡ್ಡು ಸಮಯಕ್ಕೆ ಸರಿಯಾಗಿ ಕೈಸೇರುವುದಿಲ್ಲ, ವ್ಯಾಪಾರದಲ್ಲಿ ಅಡೆತಡೆ ,ಉದ್ಯೋಗದಲ್ಲಿ ಗೊಂದಲಮಯ ವಾತಾವರಣ.
ವೃಷಭ / ಸಂಬಂಧಿಕರೊಡನೆ ಭಿನ್ನಾಭಿಪ್ರಾಯ. ದೂರ ಪ್ರಯಾಣ. ಮಾನಸಿಕ ನೆಮ್ಮದಿ, ವ್ಯಾಜ್ ಸೃಷ್ಟಿಯಾಗಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗಿಗಳಿಗೆ ಕೆಲಸದ ಒತ್ತಡ.
21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ
ಮಿಥುನ / ಒಪ್ಪಂದ ಯಶಸ್ವಿಯಾಗಲಿವೆ. ನೂತನ ವಸ್ತು ಖರೀದಿಸುವ ಯೋಗವಿದ್ದು, ಆದಾಯದ ಮೂಲ ವಿಸ್ತಾರವಾಗಲಿವೆ. ವ್ಯಾಪಾರ ವ್ಯವಹಾರ ಅತ್ಯುತ್ಸಾಹದಿಂದ ಸಾಗಲಿದೆ. ಮನೆ ಹಾಗೂ ವಾಹನ ಖರೀದಿ ಅದೃಷ್ಟವಿದೆ. ಉದ್ಯೋಗ ಕ್ಷೇತ್ರದಲ್ಲಿ ಪಟ್ಟ ಶ್ರಮಕ್ಕೆ ತಕ್ಕ ಮನ್ನಣೆ. ‘
ಕರ್ಕಾಟಕ / ಯಾವುದೇ ಕಾರಣವಿಲ್ಲದೆ ಸಂಬಂಧಿಕರೊಂದಿಗೆ ವೈರತ್ವ ಬೆಳೆಯುವ ಸಾಧ್ಯತೆ ಇದೆ. ದೂರ ಪ್ರಯಾಣ. ಆರೋಗ್ಯದಲ್ಲಿ ಏರುಪೇರು. ವ್ಯಾಪಾರದಲ್ಲಿ ಕೊಂಚ ಹಿನ್ನಡೆ, ಉದ್ಯೋಗಿಗಳಿಗೆ ಕೆಲಸದ ಹೊರೆ.
ಸಿಂಹ /ಹೊಸ ಜನರ ಪರಿಚಯ. ಆರ್ಥಿಕವಾಗಿ ಹೆಚ್ಚಿನ ಆದಾಯ ಬರಲಿದೆ. ಸಂದರ್ಶನಗಳಲ್ಲಿ ಯಶಸ್ಸು ಅನಿರೀಕ್ಷಿತವಾಗಿ ವಸ್ತು ಲಾಭ. ವ್ಯಾಪಾರದಲ್ಲಿ ಉತ್ತಮ ಬೆಂಬಲ, ಉದ್ಯೋಗ ಸ್ಥಳದಲ್ಲಿ ಉತ್ಸಾಹದ ವಾತಾವರಣ.

ಕನ್ಯಾ / ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ. ಪ್ರಯಾಣ ಮುಂದೂಡಲ್ಪಡಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ದಿನ. ಉದ್ಯೋಗದಲ್ಲಿ ಸಾಧಾರಣ ದಿನ
ತುಲಾ / ದಿನ ಸುಲಭವಾಗಿ ನಡೆಯಲಿದೆ. ಹೊಸ ಉದ್ಯೋಗವಕಾಶ. ಕೈಹಾಕಿದ ಕೆಲಸಗಳಲ್ಲಿ ಜಯ ಸಿಗಲಿದೆ. ದೇವಾಲಯಗಳಿಗೆ ಭೇಟಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಇದಾಗಿದೆ. ವ್ಯಾಪಾರ ಹಾಗೂ ಉದ್ಯೋಗ ಎರಡರಲ್ಲೂ ಉತ್ಸಾಹಭರಿತ ವಾತಾವರಣ ಇರಲಿದೆ.
ವೃಶ್ಚಿಕ / ಉದ್ಯೋಗದ ಹುಡುಕಾಟಕ್ಕೆ ತಕ್ಕ ಫಲ ಸಿಗಲಿದೆ. ಬಂಧುಮಿತ್ರರಿಂದ ಶುಭ ಸುದ್ದಿ, ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಆಸ್ತಿಗೆ ಸಂಬಂಧಿಸಿದ ಹಳೆಯ ವಿವಾದ ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ.
ಧನುಸ್ಸು / ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣಪುಟ್ಟ ಗೊಂದಲ. ಮಾನಸಿಕ ಒತ್ತಡ ಹಾಗೂ ಅನಾರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ.
ಮಕರ / ಹೊಸ ಸಾಲದ ಮೊರೆ. ನಿಗದಿತ ಪ್ರಯಾಣ ರದ್ದಾಗಲಿವೆ. ದೈಹಿಕ ಶ್ರಮದ ದಿನ , ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.
ಕುಂಭ / ಪ್ರಭಾವಿ ವ್ಯಕ್ತಿಗಳ ಪರಿಚಯ. ಬರಬೇಕಾಗಿದ್ದ ಹಳೆಯ ಬಾಕಿ ಕೈಸೇರಲಿದೆ. ವಿರೋಧಿಗಳು ಸಹ ಸ್ನೇಹಿತರಾಗುವರು. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ತಕ್ಕ ಮನ್ನಣೆ
ಮೀನ / ಸೂಕ್ತ ಮನ್ನಣೆ ದೊರೆಯಲಿದೆ. ಹೊಸ ಜಾಗ ಖರೀದಿ, ಪ್ರಮುಖ ನಿರ್ಧಾರ ಕೈಗೊಳ್ಳಲು ಇದು ಸಕಾಲ. ವ್ಯಾಪಾರದಲ್ಲಿ ಧೈರ್ಯದಿಂದ ಮುನ್ನಡೆಯುವಿರಿ. ಉದ್ಯೋಗಿಗಳಿಗೆ ಶುಭ ಸುದ್ದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿವಮೊಗ್ಗ: ಮಾ. 1 ರಂದು ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
