ಯುವನಿಧಿ ಕಾರ್ಯಕ್ರಮ! ವಾಹನ ಸಂಚಾರದ ಮಾರ್ಗ ಬದಲಾವಣೆ! ಓಡಾಡುವ ದಾರಿಯ ವಿವರ ಇಲ್ಲಿದೆ!

Yuvanidhi Program! Here is the details of the change in the route of vehicular traffic

ಯುವನಿಧಿ ಕಾರ್ಯಕ್ರಮ! ವಾಹನ ಸಂಚಾರದ ಮಾರ್ಗ ಬದಲಾವಣೆ! ಓಡಾಡುವ ದಾರಿಯ ವಿವರ ಇಲ್ಲಿದೆ!
Yuvanidhi Program! Here is the details of the change in the route of vehicular traffic

SHIVAMOGGA  |  Jan 10, 2024  |   ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯಲಿರುವ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ  ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಪರ್ಯಾಯ ಮಾರ್ಗಗಳಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ 

( ದಿನಾಂಕ: 12-01-2024 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 06-30 ಗಂಟೆಯವರೆಗೆ )

1) ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಯ್ಯೋಳ ಸರ್ಕಲ್- ಗೋಪಾಳ ಸರ್ಕಲ್-ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿಗೆ ರಸ್ತೆಗೆ ಸೇರುವುದು.

2 ) ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ - ಆಯ್ಯೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.

3) ಶಿವಮೊಗ್ಗ ದಿಂದ ಶಿಕಾರಿಪುರ, ನ್ಯಾಮತಿ ಸೊರಬಾ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು -ಹಾರಳ್ಳಿ-ಸವಳಂಗ ಮಾರ್ಗವಾಗಿ ಚಲಿಸುವುದು.

4) ಶಿಕಾರಿಪುರ ನ್ಯಾಮತಿ ಸೊರಬಾ ಕರೆಯಿಂದ ಶಿವಮೊಗ್ಗ ಕ್ಕೆ ಬರುವ ಎಲ್ಲಾ ವಾಹನಗಳು : - ಸವಳಂಗ ಹಾರಳ್ಳಿ ಆಯನೂರು ಮಾರ್ಗವಾಗಿ ಶಿವಮೊಗ್ಗ ಕ್ಕೆ ಬರುವುದು.

5) ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡ ಗಳಿಗೆ ಹೋಗುವ ಎಲ್ಲಾ ವಾಹನಗಳು :- ರಾಗಿಗುಡ್ಡ ಕುವೆಂಪು ನಗರದ ಮುಖಾಂತರ ಚಲಿಸುವುದು.

6) ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡ ಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು  ಕುವೆಂಪು ನಗರ- ರಾಗಿಗುಡ್ಡ - ಸಂಗೋಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಚಲಿಸುವುದು ಎಂದು ಸೂಚಿಸಲಾಗಿದೆ. 

ಇನ್ನೂ ಅಕ್ಕಪಕ್ಕದ ಜಿಲ್ಲೆಯವರು  : ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ!